ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜಯಗಳಿಸಿ ಬಿಜೆಪಿಗೆ ಪೆಟ್ಟು ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ದುರಹಂಕಾರ, ಹಣಬಲ, ಜೈ ಶ್ರೀರಾಮ್ ಘೋಷಣೆಯ ದುರುಪಯೋಗ ಸೋತಿದೆ ಎಂದು ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ದುರಹಂಕಾರ, ಹಣಬಲ, ಜೈ ಶ್ರೀರಾಮ್ ಘೋಷಣೆಯನ್ನು ರಾಜಕೀಯಕ್ಕಾಗಿ ಬಳಸಿರುವುದು, ಒಡೆದು ಆಳುವ ತಂತ್ರ, ಚುನಾವಣಾ ಆಯೋಗ ಸೋಲು ಕಂಡಿದೆ. ಇವೆಲ್ಲದರ ವಿರುದ್ಧ ನಿಂತು ಮಮತಾ ಬ್ಯಾನರ್ಜಿ ಗೆದ್ದರು" ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.