ಕರ್ನಾಟಕ

karnataka

ಹಣ ಚಿನ್ನಾಭರಣ ಪಾರ್ಥ ಚಟರ್ಜಿಗೆ ಸೇರಿದ್ದು: ಇಡಿ ತನಿಖೆ ವೇಳೆ ಬಾಯ್ಬಿಟ್ಟ ನಟಿ ಅರ್ಪಿತಾ

By

Published : Sep 20, 2022, 9:54 PM IST

ಪಾರ್ಥ ಮತ್ತು ಅರ್ಪಿತಾ ಅವರ ಜಂಟಿ ಹೆಸರಿನಲ್ಲಿರುವ 31 ವಿಮಾ ಪಾಲಿಸಿಗಳಿಗೆ ಪಾರ್ಥ ಚಟರ್ಜಿ ಅವರೇ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸುತ್ತಿದ್ದರು ಎಂದು ಇಡಿ ಹೇಳಿಕೊಂಡಿದೆ.

ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ
ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣದ (SSC scam) ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ, ನಟಿ ಅರ್ಪಿತಾ ಮುಖರ್ಜಿ ಅವರ ಬಂಧನ ಮಾಡಲಾಗಿದೆ. ತನಿಖೆ ವೇಳೆ ವಶಪಡಿಸಿಕೊಂಡ 50 ಕೋಟಿ ರೂ. ಮತ್ತು 5 ಕೋಟಿ ಮೌಲ್ಯದ ಚಿನ್ನಾಭರಣ ಪಾರ್ಥ ಚಟರ್ಜಿಗೆ ಸೇರಿದೆ ಎಂದಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಮೊದಲ ಚಾರ್ಜ್‌ಶೀಟ್‌ನಲ್ಲಿ ಇದನ್ನು ಉಲ್ಲೇಖಿಸಿದೆ.

ತನ್ನ ತಾಯಿಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ್ದರಿಂದ ತಾನು ಇಲ್ಲಿಯವರೆಗೆ ಸತ್ಯ ಮರೆಮಾಚಿದ್ದೆ ಎಂದು ಅರ್ಪಿತಾ ಹೇಳಿದ್ದಾರೆ. ಮೂಲಗಳ ಪ್ರಕಾರ, ಅರ್ಪಿತಾ ಮುಖರ್ಜಿ ಅವರ ಲಿಖಿತ ಹೇಳಿಕೆಯನ್ನು ಇಡಿ ತಮ್ಮ ಚಾರ್ಜ್ ಶೀಟ್‌ನಲ್ಲಿ ಹೈಲೈಟ್ ಮಾಡಿದೆ.

ಏನನ್ನೂ ಬಹಿರಂಗಪಡಿಸದ ಪಾರ್ಥ: ಹೈ - ಪ್ರೊಫೈಲ್ ಬಂಧನದ ನಂತರ ತನಿಖಾಧಿಕಾರಿಗಳು ವಶಪಡಿಸಿಕೊಂಡ ಅಪಾರ ಪ್ರಮಾಣದ ಹಣದ ನಿಖರವಾದ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಪತ್ತೆದಾರರು ವಿಚಾರಣೆ ನಡೆಸಿದ್ದಾರೆ. ಆದರೆ, ಪಾರ್ಥ ಅವರು ಇದುವರೆಗೂ ಏನನ್ನೂ ಬಹಿರಂಗಪಡಿಸಿಲ್ಲ.

ಅರ್ಪಿತಾ ಮುಖರ್ಜಿ ಅವರು ಅಲಿಪೋರ್ ಮಹಿಳಾ ಸುಧಾರಣಾ ಕೇಂದ್ರದಲ್ಲಿದ್ದಾಗ ಇಡಿಗೆ ಲಿಖಿತ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಪಾರ್ಥ ಮತ್ತು ಅರ್ಪಿತಾ ಅವರ ಜಂಟಿ ಹೆಸರಿನಲ್ಲಿರುವ 31 ವಿಮಾ ಪಾಲಿಸಿಗಳಿಗೆ ಪಾರ್ಥ ಚಟರ್ಜಿ ಅವರೇ ಎಲ್ಲ ಪ್ರೀಮಿಯಂಗಳನ್ನು ಪಾವತಿಸುತ್ತಿದ್ದರು ಎಂದು ಇಡಿ ಹೇಳಿಕೊಂಡಿದೆ.

ಅಕ್ರಮ ಹಣಕಾಸು ವಹಿವಾಟು ಆರೋಪ: ಪ್ರಾಸಂಗಿಕವಾಗಿ ಮತ್ತೊಂದು ಕೇಂದ್ರೀಯ ಸಂಸ್ಥೆ ಸಿಬಿಐ ಇತ್ತೀಚೆಗೆ ಶಿಕ್ಷಕರ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ಪಾರ್ಥ ಚಟರ್ಜಿಯನ್ನು ಕಸ್ಟಡಿಗೆ ತೆಗೆದುಕೊಂಡಿತು. ಆದರೆ, ಇದಕ್ಕೂ ಮುನ್ನ ಶಿಕ್ಷಕರ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ಅಕ್ರಮ ಹಣಕಾಸು ವಹಿವಾಟಿನ ಆರೋಪದ ಮೇಲೆ ಪಾರ್ಥ ಅವರನ್ನು ಇಡಿ ಬಂಧಿಸಿತ್ತು. ಅವರ ನಿಕಟವರ್ತಿ ಅರ್ಪಿತಾ ಮುಖರ್ಜಿ ಅವರನ್ನೂ ಬಂಧಿಸಲಾಗಿದೆ.

ಓದಿ:ನಟಿ ಮನೆಯಲ್ಲಿ ಕೋಟಿ - ಕೋಟಿ ಹಣ ಜಪ್ತಿ: ಇಡಿಯಿಂದ ಅರ್ಪಿತಾ ಮುಖರ್ಜಿ ಬಂಧನ

ABOUT THE AUTHOR

...view details