ಕರ್ನಾಟಕ

karnataka

ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಅರ್ನಬ್ ಗೋಸ್ವಾಮಿ

By

Published : Nov 5, 2020, 7:06 PM IST

ಮುಂಬೈ ಪೊಲೀಸರು ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

Arnab Goswami files petition in Mumbai High Court against arrest
ಹೈಕೋರ್ಟ್ ಮೆಟ್ಟಿಲೇರಿದ ಆರ್ನಬ್ ಗೋಸ್ವಾಮಿ

ಮುಂಬೈ: ಬುಧವಾರ ಬಂಧನಕ್ಕೊಳಗಾದ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ತಮ್ಮ ಬಂಧನ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎಂ.ಎಸ್.ಕಾರ್ನಿಕ್ ಅರ್ಜಿ ವಿಚಾರಣೆ ನಡೆಸಲಿದ್ದಾರೆ.

ಗೋಸ್ವಾಮಿಯನ್ನು ನವೆಂಬರ್ 4ರಂದು ಮುಂಬೈನಲ್ಲಿ ಬಂಧಿಸಿದ ಪೊಲೀಸರು, ತಡರಾತ್ರಿ ರಾಯಗಡದ ಅಲಿಬಾಗ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

2018ರಲ್ಲಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋಸ್ವಾಮಿಯನ್ನು ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿಯಿಂದ ನೀಡಬೇಕಾಗಿದ್ದ ಬಾಕಿ ಪಾವತಿಸದ ಹಿನ್ನೆಲೆ ವಾಸ್ತುಶಿಲ್ಪಿ ಯುವಕ ಮತ್ತು ಆತನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಅರ್ನಬ್ ಮೇಲಿದೆ.

ಅರ್ನಬ್ ಗೋಸ್ವಾಮಿಯ ಬಂಧನವನ್ನು ಬಿಜೆಪಿಯ ಹಲವು ನಾಯಕರು ಖಂಡಿಸಿದ್ದಾರೆ. ಬಾಲಿವುಡ್​ ನಟಿ ಕಂಗನಾ ರನೌತ್​​ ಕೂಡ ಗೋಸ್ವಾಮಿ ಬಂಧನ ಖಂಡಿಸಿದ್ದಾರೆ.

ABOUT THE AUTHOR

...view details