ಕರ್ನಾಟಕ

karnataka

By

Published : Apr 30, 2023, 4:58 PM IST

ETV Bharat / bharat

ರೈಫಲ್‌ನಿಂದ ಹಾರಿ ತಲೆಗೆ ಬಿದ್ದ ಗುಂಡು: ಯೋಧನ ಸ್ಥಿತಿ ಚಿಂತಾಜನಕ

ಜಾರ್ಖಂಡ್​ನ ರಾಂಚಿಯ ಸೇನಾ ಶಿಬಿರದಲ್ಲಿ ಗುಂಡು ತಲುಗಿ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.

army-jawan-critical-after-being-shot-from-his-insas-rifle-at-ranchi-camp
ರೈಫಲ್‌ನಿಂದ ಹಾರಿ ತಲೆಗೆ ಬಿದ್ದ ಗುಂಡು: ಯೋಧನ ಸ್ಥಿತಿ ಚಿಂತಾಜನಕ

ರಾಂಚಿ (ಜಾರ್ಖಂಡ್):ಬಂದೂಕಿನಿಂದ ಹಾರಿದ ಗುಂಡಿನಿಂದ ಗಾಯಗೊಂಡು ಯೋಧರೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಭಾನುವಾರ ನಡೆದಿದೆ. ತಲೆಗೆ ಗುಂಡೇಟು ಬಿದ್ದಿದ್ದರಿಂದ ಯೋಧನ ಸ್ಥಿತಿ ಚಿಂತಾಜನಕವಾಗಿದೆ. ಆದರೆ, ಈ ಗುಂಡು ಯೋಧನಿಗೆ ಯಾರಾದರೂ ಹಾರಿಸಿದ್ದಾರೋ ಅಥವಾ ಆಕಸ್ಮಿಕವಾಗಿ ಅಜಾಗರೂಕತೆಯಿಂದ ಗುಂಡು ಸಿಡಿದಿಯೋ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇಲ್ಲಿನ ಖೇಲ್ ಗ್ರಾಮದಲ್ಲಿರುವ ಸೇನಾ ಶಿಬಿರದಲ್ಲಿ ಈ ಘಟನೆ ವರದಿಯಾಗಿದೆ. ಗುಂಡೇಟು ತಾಗಿ 44ನೇ ರೆಜಿಮೆಂಟ್​ನ ಯೋಧ ಜಿಗ್ನೇಶ್ ಸೇನಾ ಟ್ರಕ್​ನಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದರು. ಐಎನ್​​ಎಸ್​ಎಎಸ್​ ರೈಫಲ್ ಕೂಡ ಸ್ಥಳದಲ್ಲಿ ಪತ್ತೆಯಾಗಿದೆ. ಈ ಘಟನೆಯ ವಿಷಯ ತಿಳಿದ ಅಧಿಕಾರಿಗಳು ಮತ್ತು ಇತರ ಸೈನಿಕರು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸೇನಾ ಮೂಲಗಳ ಪ್ರಕಾರ, ಗಾಯಾಳು ಯೋಧ ಜಿಗ್ನೇಶ್​ ತಮಿಳುನಾಡು ಮೂಲದವರಾಗಿದ್ದಾರೆ. ರೈಫಲ್‌ನಿಂದ ಗುಂಡು ಸಿಡಿದ ಶಬ್ದ ಕೇಳಿದ ನಂತರ ಇತರ ಯೋಧರು ಆತಂಕದಲ್ಲಿ ಸ್ಥಳಕ್ಕೆ ದೌಡಾಯಿಸಿದರು. ರೈಫಲ್‌ನಿಂದ ಹಾರಿದ ಗುಂಡು ಜಿಗ್ನೇಶ್​ ತಲೆಗೆ ಹೊಕ್ಕಿದ್ದು, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸದ್ಯ ಯೋಧನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಗಾಯಾಳು ಸೈನಿಕ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿಯೇ ಇದ್ದರು. ಎಂದಿನಂತೆ ಇಂದು ಕೂಡ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಆದರೆ, ಈ ಘಟನೆ ಹೇಗೆ ನಡೆಯಿತು ಎಂಬ ನಿಖರವಾದ ಮಾಹಿತಿ ಲಭ್ಯವಾಗಲಿಲ್ಲ. ಈ ಬಗ್ಗೆ ಸೇನಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಕರ್ನಾಟಕದ ಯೋಧರ ಆತ್ಮಹತ್ಯೆ:ಕೆಲ ದಿನಗಳ ಹಿಂದೆ ಪಂಜಾಬ್​ ಮತ್ತು ಅಸ್ಸೋಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕದ ಇಬ್ಬರು ಯೋಧರು ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿದ್ದವು. ಏಪ್ರಿಲ್​ 2ರಂದು ಪಂಜಾಬ್​ - ಹರಿಯಾಣ ಸೆಕ್ರೆಟರಿಯೇಟ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ದಾವಣಗೆರೆ ಮೂಲದ ನಾಗರಾಜು ಸಾವಿಗೆ ಶರಣಾಗಿದ್ದರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯಲ್ಲಿದ್ದ ನಾಗರಾಜು ಚಂಡೀಗಢದಲ್ಲಿರುವ ಸೆಕ್ರೆಟರಿಯೇಟ್‌ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆದರೆ, ಅಂದು ಬೆಳಗಿನ ಜಾವ 4.30ರ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ:ಪಂಜಾಬ್​ ಸೆಕ್ರೆಟರಿಯೇಟ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕದ ಯೋಧ ಆತ್ಮಹತ್ಯೆ

ಮತ್ತೊಂದೆದೆ, ಅಸ್ಸೋಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ನಿವಾಸಿ ಸಂದೀಪ್(27) ಆತ್ಮಹತ್ಯೆಗೆ ಶರಣಾಗಿದ್ದರು. ಅಸ್ಸೋಂ ರೈಫಲ್ಸ್​ ​4ನೇ ರೆಜಿಮೆಂಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಮಾರ್ಚ್​ 20ರಂದು ಕರ್ತವ್ಯದಲ್ಲಿದ್ದಾಗಲೇ ಗನ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಅಸ್ಸೋಂನಿಂದ ಸ್ವಗ್ರಾಮಕ್ಕೆ ಮೃತದೇಹ ರವಾನಿಸಲಾಗಿತ್ತು. ಸಂದೀಪ್​ ತಮ್ಮ ಮನೆ ನಿರ್ಮಾಣಕ್ಕೆ ಸಾಲ ಮಾಡಿದ್ದರು. ಸಾಲದ ಪ್ರಮಾಣದ ಹೆಚ್ಚಾದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದರು ಎಂದು ತಿಳಿದು ಬಂದಿತ್ತು.

ಇದನ್ನೂ ಓದಿ:ಅಸ್ಸಾಂ ರೈಫಲ್ಸ್​ನಲ್ಲಿದ್ದ ರಿಪ್ಪನ್‌ಪೇಟೆಯ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ABOUT THE AUTHOR

...view details