ಕರ್ನಾಟಕ

karnataka

By

Published : Sep 3, 2021, 10:18 AM IST

ETV Bharat / bharat

ಗಡಿಯಲ್ಲಿ ಒಳನುಸುಳುಕೋರರ ಸಂಚು ವಿಫಲಗೊಳಿಸಿದ ಸೇನೆ..

ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳಲು ಪ್ರಯತ್ನಿಸುತ್ತಿದ್ದವರ ಯತ್ನವನ್ನು ಭಾರತೀ ಸೇನೆ ವಿಫಲಗೊಳಿಸಿದೆ.

ಭಾರತೀಯ ಸೇನೆ
ಭಾರತೀಯ ಸೇನೆ

ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಗಡಿಯಲ್ಲಿ ಒಳನುಸುಳುಕೋರರ ಹಾವಳಿ ಮಿತಿ ಮೀರಿದೆ. ಗುರುವಾರ ರಾತ್ರಿ ಎಲ್​ಒಸಿ (ಗಡಿ ನಿಯಂತ್ರಣ ರೇಖೆ) ಬಳಿ ಒಳ ನುಸುಳುವಿಕೆಯನ್ನು ಸೇನೆ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಪೂಂಚ್​ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳುವಿಕೆ ಯತ್ನ ನಡೆದಿತ್ತು. ಅದನ್ನು ನಮ್ಮ ಸೇನೆ ವಿಫಲಗೊಳಿಸಿತು ಎಂದು ಪಿಆರ್​ಒ ಮಾಹಿತಿ ನೀಡಿದ್ದಾರೆ.

ಪೊಲೀಸ್ ಠಾಣೆ ಮೇಲೆ ಗ್ರೆನೇಡ್ ದಾಳಿ

ಬುಧವಾರ ಮುಂಜಾನೆ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶೆರ್‌ಬಾಗ್‌ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದಿದ್ದಾರೆ. ಈ ಮಧ್ಯೆ, ಭಾರತೀಯ ಗುಪ್ತಚರ ಸಂಸ್ಥೆಗಳು ಭಯೋತ್ಪಾದಕರು ಗಡಿ ದಾಟಿ ಕಾಶ್ಮೀರ ಕಣಿವೆಯಲ್ಲಿ ಏನಾದರೂ ಸಂಚು ರೂಪಿಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸೇನೆಯು ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ: ಸೇವೆಗೆ ಹಾಜರಾಗಲು ಹೊರಟಿದ್ದಾಗ ಅಪಘಾತ: ಅಗಲಿದ ವೀರ ಯೋಧನಿಗೆ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ

ABOUT THE AUTHOR

...view details