ಕರ್ನಾಟಕ

karnataka

By

Published : May 5, 2022, 12:47 PM IST

Updated : May 5, 2022, 12:59 PM IST

ETV Bharat / bharat

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: ನೆರವಿಗೆ ಸತ್ಯಸಾಯಿ ಟ್ರಸ್ಟ್​ ಮೊರೆ ಹೋದ ಅರ್ಜುನ್​ ರಣತುಂಗ

ಕಂಡರಿಯದ ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾದ ನೆರವಿಗೆ ಬರಬೇಕು ಎಂದು ಮಾಜಿ ಕ್ರಿಕೆಟಿಗ ಅರ್ಜುನ್​ ರಣತುಂಗ ಸತ್ಯಸಾಯಿ ಟ್ರಸ್ಟ್​ನ ಮೊರೆ ಹೋಗಿದ್ದಾರೆ.

arjuna-ranatunga
ರಣತುಂಗ ಮನವಿ

ಆಂಧ್ರಪ್ರದೇಶ:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದ ಜನರ ನೆರವಿಗೆ ಧಾವಿಸಬೇಕು ಎಂದು ಮಾಜಿ ಕ್ರಿಕೆಟಿಗ ಅರ್ಜುನ್​​ ರಣತುಂಗ ಅವರು ಪುಟ್ಟಪರ್ತಿ ಸತ್ಯಸಾಯಿ ಟ್ರಸ್ಟ್​ಗೆ ಮನವಿ ಮಾಡಿದ್ದಾರೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಪ್ರಶಾಂತಿ ನಿಲಯದಲ್ಲಿರುವ ಸತ್ಯಸಾಯಿ ಮಹಾ ಸಮಾಧಿಗೆ ಭೇಟಿ ನೀಡಿ, ಟ್ರಸ್ಟ್ ಕಚೇರಿಯಲ್ಲಿ ಮ್ಯಾನೇಜಿಂಗ್ ಟ್ರಸ್ಟಿಯಾದ ರತ್ನಾಕರ್ ರಾಜು ಅವರೊಂದಿಗೆ 2 ಗಂಟೆಗಳ ಕಾಲ ಸಭೆ ನಡೆಸಿದರು.

ಶ್ರೀಲಂಕಾದ ಜನರು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಇದರಿಂದಾಗಿ ಟ್ರಸ್ಟ್​ ಉದಾರವಾಗಿ ನಡೆದುಕೊಂಡು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಟ್ರಸ್ಟ್‌ಗೆ ಒತ್ತಾಯಿಸಿದರು. ಔಷಧಿಗಳನ್ನು ಒದಗಿಸಿಕೊಡುವ ಮನವಿಗೆ ಟ್ರಸ್ಟ್ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ರಣತುಂಗ ತಿಳಿಸಿದರು.

ಇದನ್ನೂ ಓದಿ:ಮಹಿಳೆಯರ ಬಳಿಕ ಕಾರ್ಮಿಕರಿಗೂ ಉಚಿತ ಬಸ್​ಪಾಸ್​ ಸೌಲಭ್ಯ ನೀಡಿದ ಆಪ್​ ಸರ್ಕಾರ

Last Updated : May 5, 2022, 12:59 PM IST

ABOUT THE AUTHOR

...view details