ಅಮರಾವತಿ(ಆಂಧ್ರಪ್ರದೇಶ):ಅಸ್ತಿತ್ವದಲ್ಲಿರುವ ಕಾಂಟ್ರಿಬ್ಯೂಟರಿ ಪಿಂಚಣಿ ಯೋಜನೆ (ಸಿಪಿಎಸ್) ವಿರೋಧದ ನಡುವೆ ಆಂಧ್ರ ಪ್ರದೇಶ ಸರ್ಕಾರವು ಸೋಮವಾರ ಗ್ಯಾರಂಟಿಡ್ ಪಿಂಚಣಿ ಯೋಜನೆ (ಜಿಪಿಎಸ್) ತರುವ ಹೊಸ ಪ್ರಸ್ತಾವನೆ ಬಳಿಕ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಸಿಪಿಎಸ್ ಅನ್ನು ರದ್ದುಗೊಳಿಸುವುದಾಗಿ ಚುನಾವಣೆಯ ಮೊದಲು ವಿರೋಧ ಪಕ್ಷದ ನಾಯಕರಾಗಿದ್ದಾಗ ಜಗನ್ ಜನರಿಗೆ ಭರವಸೆ ನೀಡಿದ್ದರು. ಸಿಎಂ ನೀಡಿದ್ದ ಭರವಸೆಯನ್ನು ಕಾಪಾಡಿಕೊಳ್ಳುಬೇಕೆಂಬ ಆಗ್ರಹ ಸರ್ಕಾರಿ ನೌಕರರು ಮತ್ತು ಶಿಕ್ಷಕರ ಸಂಘಗಳಿಂದ ಹೆಚ್ಚುತ್ತಿತ್ತು. ಅವರ ಬೇಡಿಕೆಯಂತೆ ಸರ್ಕಾರವು ಸಿಪಿಎಸ್, ಓಲ್ಡ್ ಪಿಂಚಣಿ ನೀತಿ (ಒಪಿಎಸ್)ಯನ್ನು ಮಧ್ಯಮ ಹಂತವಾಗಿ ಸರ್ಕಾರ ತಂದಿದೆ. ಸಿಪಿಎಸ್ ಅನ್ನು ಕೈಬಿಟ್ಟು ಹಳೆಯ ಪಿಂಚಣಿ ಯೋಜನೆಯನ್ನು ಮುಂದುವರಿಸುವಂತೆ ನೌಕರರ ಸಂಘ ಆಗ್ರಹ ಮತ್ತಷ್ಟು ಹೆಚ್ಚಾಗಿ ತೊಡಗಿದೆ.
ಇನ್ನು ಸಿಪಿಎಸ್ ಅನ್ನು ಪರಿಶೀಲಿಸಲು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತವು ಮೂರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಆರು ಸದಸ್ಯರ ಹೊಸ ಸಮಿತಿಯನ್ನು ರಚಿಸಿತ್ತು. ಸರ್ಕಾರವು ಜಂಟಿ ಸ್ಟಾಫ್ ಕೌನ್ಸಿಲ್ನ ಸಭೆ ನಡೆಸಿ CPS ಅನ್ನು ತೆಗೆದುಹಾಕುವ ಬದಲು GPS ಅನ್ನು ಪ್ರಸ್ತಾಪಿಸಿತು. ಆದರೆ ಸರ್ಕಾರಿ ನೌಕರರು ಮತ್ತು ಶಿಕ್ಷಕರು ಸಂಘಗಳು ಈ ಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಒತ್ತಾಯಿಸಿ ತಮ್ಮ ಪ್ರತಿಭಟನೆ ಹೆಚ್ಚಿಸಿತು.
ಓದಿ:ಶಾಸಕರು ಎಷ್ಟು ಬಾರಿ ಗೆದ್ದರೂ ಒಂದೇ ಅವಧಿಗೆ ಪಿಂಚಣಿ: ಪಂಜಾಬ್ ಸಿಎಂ ಮಹತ್ವದ ನಿರ್ಧಾರ
ಇದನ್ನು ಒಪ್ಪದ ನೌಕರರ ಸಂಘಗಳು ಜಿಪಿಎಸ್ ಅನ್ನು ವಿರೋಧಿಸುತ್ತಿದ್ದು, ಸಿಪಿಎಸ್ ಅನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗಿಬೇಕು ಎಂದು ಪಟ್ಟು ಹಿಡಿದಿದೆ. ತಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ನೌಕರರ ಸಂಘ ಹೇಳಿದೆ. ಈ ಗೊಂದಲದಿಂದಾಗಿ ಎಲ್ಲ ಸಂಘಗಳೊಂದಿಗೆ ಮುಂದಿನ 10 ದಿನಗಳಲ್ಲಿ ಮತ್ತೊಂದು ಸಭೆ ಕರೆಯುವುದಾಗಿ ಸರ್ಕಾರ ಹೇಳಿದೆ.