ಕರ್ನಾಟಕ

karnataka

ETV Bharat / bharat

ರಾಜಸ್ಥಾನದ 'ಕೈ' ಶಾಸಕರಿಗೆ ಆಡಳಿತ ವಿರೋಧಿ ಅಲೆ ಬಿಸಿ; ಅಭ್ಯರ್ಥಿಗಳ ಆಯ್ಕೆಗೆ ಹೊಸ ಮಾನದಂಡ - ವಿರೋಧಿ ಅಲೆ ಕಂಡು ಬಂದಿದ್ದರೂ

ರಾಜಸ್ಥಾನ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಟಿಕೆಟ್‌ ಪಡೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಯಕರ ಮೂಲಕ ಲಾಬಿಗೆ ಮುಂದಾಗಿದ್ದಾರೆ.

anti incumbency against Rajasthan Congress MLA; New criteria for selection of candidates
anti incumbency against Rajasthan Congress MLA; New criteria for selection of candidates

By ETV Bharat Karnataka Team

Published : Oct 10, 2023, 6:42 PM IST

ನವದೆಹಲಿ: ಆಂತರಿಕ ಸಮೀಕ್ಷೆಯಲ್ಲಿ ತಮ್ಮ ಪಕ್ಷದ ಶಾಸಕರ ವಿರುದ್ಧ ಶೇ 30ರಷ್ಟು ಆಡಳಿತ ವಿರೋಧಿ ಅಲೆ ಕಂಡುಬಂದಿದ್ದರೂ ಸಾಮಾಜಿಕ ಅಂಶ, ಜಾತಿ ಸಮೀಕರಣ ಮತ್ತು ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳ ಸಣ್ಣ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ. ಈ ಕುರಿತು ಈಟಿವಿ ಭಾರತ್​ ಜೊತೆಗೆ ಮಾತನಾಡಿರುವ ರಾಜಸ್ಥಾನದ ಉಸ್ತುವಾರಿ ಹೊತ್ತಿರುವ ಎಐಸಿಸಿ ಕಾರ್ಯದರ್ಶಿ ವೀರೇಂದ್ರ ರಾಥೋಡ್​​, ಅಭ್ಯರ್ಥಿಗಳ ಸಾಮಾಜಿಕ ಅಂಶ, ಜಾತಿ ಸಮೀಕರಣ ಮತ್ತು ಗೆಲ್ಲುವ ಸಾಮರ್ಥ್ಯದ ಅಧಾರದಡಿ ನಾವು ಹೊಸ ಮಾನದಂಡ ರೂಪಿಸಿ, ಅಭ್ಯರ್ಥಿಗಳು ಶಾರ್ಟ್​​​ ಲಿಸ್ಟ್​​​ ಮಾಡಿದ್ದೇವೆ ಎಂದರು.

ಐಸಿಸಿ ಕಾರ್ಯದರ್ಶಿ, ರಾಜಸ್ಥಾನದ ಉಸ್ತುವಾರಿಯೂ ಆಗಿರುವ ಕ್ವಾಜಿ ನಿಜಾಮುದ್ದೀನ್​​ ಮಾತನಾಡಿ, ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷಕ್ಕೆ ವಿರೋಧಿ ಅಲೆ ಸಹಜ. ಅನೇಕ ಶಾಸಕರ ವಿರುದ್ಧ ಈ ರೀತಿ ವಿರೋಧಿ ಅಲೆ ವ್ಯಕ್ತವಾಗಿದೆಯೇ ಹೊರತು ಪಕ್ಷದ ಮೇಲಲ್ಲ. ಮತದಾರರು ಕೆಲವು ಶಾಸಕರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಆದರೆ ಪಕ್ಷದ ವಿರುದ್ಧ ಎಲ್ಲಿಯೂ ಅಸಮಾಧಾನ ಕಂಡು ಬಂದಿಲ್ಲ. ಜನರು ಗೆಹ್ಲೋಟ್​ ಸರ್ಕಾರದ ಸಾಮಾಜಿಕ ಕಲ್ಯಾಣ ಯೋಜನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿದ್ದಾರೆ ಎಂದು ಹೇಳಿದರು.

ಪಕ್ಷದ ವಿರುದ್ಧದ ಅಲೆ ಅಲ್ಲ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ಕೆಲವು ಅಸಮಾಧಾನಿತರು ಈ ರೀತಿ ವಿರೋಧಿ ಅಲೆ ಎಚ್ಚಿಸುತ್ತಿದ್ದಾರೆ. ಬಿಜೆಪಿಗೆ ಗೆಹ್ಲೋಟ್​ ಸರ್ಕಾರದ ವಿರುದ್ಧ ದಾಳಿ ಮಾಡಲು ಕಾರಣ ಹುಡುಕುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಈ ರೀತಿ ಗಾಳಿ ಸುದ್ದಿ ಹಬ್ಬಿಸಿ, ಕಾಂಗ್ರೆಸ್​ ವಿರೋಧಿ ಅಲೆ ಇದೆ ಎಂದು ಬಿಂಬಿಸುತ್ತಿದೆ. ಪಕ್ಷದಲ್ಲಿ ಕೆಲವು ಮಂದಿಗೆ ಟಿಕೆಟ್​ ತಪ್ಪಿದ್ದು, ಅವರು ಕೂಡ ಇಂತಹ ತಪ್ಪು ಸುದ್ದಿಗಳ ಬೆನ್ನು ಬಿದ್ದಿದ್ದಾರೆ ಎಂದು ಕ್ವಾಜಿ ಕಿಡಿಕಾರಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 200 ಸ್ಥಾನಗಳ ಪೈಕಿ 100ರಲ್ಲಿ ಗೆಲುವು ಕಂಡಿದೆ. ಎಐಸಿಸಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ 30 ಶಾಸಕರ ವಿರುದ್ಧ ವಿರೋಧಿ ಅಲೆ ವ್ಯಕ್ತವಾಗಿದ್ದು, ಅವರು ನಾಮಪತ್ರ ಸಲ್ಲಿಸುವುದರಿಂದ ವಂಚಿತರಾಗಬಹುದು. ಆದರೆ, ಕಾಂಗ್ರೆಸ್​ ವಿರುದ್ಧ ಯಾವುದೇ ವಿರೋಧವಿಲ್ಲ ಎಂದು ಸಮರ್ಥಿಸಿಕೊಂಡರು.

ನಾಯಕರ ಬೆನ್ನುಬಿದ್ದ ಬೆಂಬಲಿಗರು: ಆಂತರಿಕ ಸಮೀಕ್ಷೆಯ ಬೆನ್ನಲ್ಲೇ ಇದೀಗ ಅನೇಕ ಶಾಸಕರು, ಹೈಕಮಾಂಡ್​​ಗೆ ಸತ್ಯಾಂಶವನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಇನ್ನು ಪಕ್ಷದ ನಿಷ್ಠೆಯ ವಿಚಾರದಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್​ ಪೈಲಟ್​​ ಬಣಗಳು ಟಿಕೆಟ್​ ವಿಚಾರದಲ್ಲಿ ಪಕ್ಷ ನಿಷ್ಠೆಯ ಅಂಶ ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.

2020ರಲ್ಲಿ ಪೈಲಟ್​ ತಮ್ಮದೇ ಪಕ್ಷದ ವಿರುದ್ದ ಬಂಡಾಯವೆದ್ದಾಗ 20 ಶಾಸಕರು ಅವರನ್ನು ಬೆಂಬಲಿಸಿ, ರೆಸಾರ್ಟ್​​ನಲ್ಲಿ ಬೀಡು ಬಿಟ್ಟಿದ್ದರು. 2022ರಲ್ಲಿ ಕಾಂಗ್ರೆಸ್​​ ಹೈಕಮಾಂಡ್​​ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ನಾಯಕತ್ವ ಬದಲಾವಣೆಗೆ ಮುಂದಾದಾಗಲೂ ಗೆಹ್ಲೋಟ್​ ಬೆಂಬಲಿಗರು ಅವರ ಪರ ನಿಂತಿದ್ದರು. ಈ ಘಟನೆಯ ನಂತರ ಹೈಕಮಾಂಡ್​​ಗೆ ತಮ್ಮ ಬಂಡಾಯದ ಕಾರಣವನ್ನು ಪೈಲಟ್​ ಸ್ಪಷ್ಟಪಡಿಸಿದರೆ, ಗೆಹ್ಲೋಟ್​ ಸೋನಿಯಾ ಗಾಂಧಿ ಬಳಿ ತಮ್ಮ ಶಾಸಕರನ್ನು ಬೆಂಬಲಿಸಿ ಕ್ಷಮೆ ಯಾಚಿಸಿದ್ದರು. ಇದೀಗ ಗೆಹ್ಲೋಟ್​ ಮತ್ತು ಪೈಲಟ್​ ಬೆಂಬಲಿತ ಶಾಸಕರು ಈ ವಿರೋಧಿ ಅಲೆ ಹಿನ್ನೆಲೆಯಲ್ಲಿ ಟಿಕೆಟ್​ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದು, ಹೈಕಮಾಂಡ್​ ಮುಂದೆ ಟಿಕೆಟ್​​ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚುನಾವಣೆಯ ಹೊಸ್ತಿಲಲ್ಲಿ ರಾಜಸ್ಥಾನ: ಸಿಎಂ ಗೆಹ್ಲೋಟ್​ ಮುಂದಿನ ಸವಾಲುಗಳೇನು?

For All Latest Updates

ABOUT THE AUTHOR

...view details