ಕರ್ನಾಟಕ

karnataka

ETV Bharat / bharat

ಸರ್ಕಾರಿ ಜನರಲ್ ಆಸ್ಪತ್ರೆಗೆ 20 ಕೋಟಿ ದೇಣಿಗೆ ನೀಡಿದ ಮಹಿಳಾ ವೈದ್ಯೆ!

ಅಮೆರಿಕದಲ್ಲಿ ವಾಸವಾಗಿರುವ ಗುಂಟೂರಿನ ಮಹಿಳಾ ವೈದ್ಯೆ ಡಾ.ಉಮಾ ಗವಿನಿ ಅವರು ಹೊಸ ಆಸ್ಪತ್ರೆ ನಿರ್ಮಾಣಕ್ಕೆ 20 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.

By

Published : Oct 7, 2022, 11:09 PM IST

andhra-pradesh-doctor-donates-rs-20-crore-to-govt-medical-college
ಸರ್ಕಾರಿ ಜನರಲ್ ಆಸ್ಪತ್ರೆಗೆ 20 ಕೋಟಿ ದೇಣಿಗೆ ನೀಡಿದ ಮಹಿಳಾ ವೈದ್ಯೆ!

ಗುಂಟೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದ ಗುಂಟೂರಿನ ಮಹಿಳಾ ವೈದ್ಯೆಯೊಬ್ಬರು ತಮ್ಮ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಗೆ (ಜಿಜಿಹೆಚ್) ಮಾತಾ ಶಿಶು ಕಲ್ಯಾಣ ಭವನ (Mata Shishu Welfare Building) ನಿರ್ಮಾಣಕ್ಕಾಗಿ ದೇಣಿಗೆಯಾಗಿ ನೀಡಿದ್ದಾರೆ. ಇವರಿಂದ ಪ್ರೇರಿತರಾಗಿ ಇನ್ನೂ ಕೆಲವು ದಾನಿಗಳು ಮುಂದೆ ಬಂದು ದೇಣಿಗೆ ನೀಡಿದ್ದಾರೆ.

ಡಾ.ಉಮಾ ಗವಿನಿ ಎಂಬುವವರೇ ಹೊಸ ಆಸ್ಪತ್ರೆಗಾಗಿ 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದೇಣಿಗೆಯಾಗಿ ನೀಡಿದವರು. ಅಮೆರಿಕದಲ್ಲಿ ಇಮ್ಯುನೊಲೊಜಿಸ್ಟ್ ಮತ್ತು ಅಲರ್ಜಿ ಸ್ಪೆಷಲಿಸ್ಟ್ ಆಗಿ ಡಾ.ಉಮಾ ಗವಿನಿ ಕೆಲಸ ಮಾಡುತ್ತಿದ್ದಾರೆ. 1965ರಲ್ಲಿ ಗುಂಟೂರು ಮೆಡಿಕಲ್ ಕಾಲೇಜಿನಲ್ಲಿ ಮೆಡಿಸಿನ್ ಮಾಡಿದ್ದ ಅವರು, ಉನ್ನತ ಶಿಕ್ಷಣ ಮುಗಿಸಿ ಅಮೆರಿಕಕ್ಕೆ ಹೋಗಿ ನೆಲೆಸಿದ್ದಾರೆ. ಡಾ.ಉಮಾ ಅವರ ಪತಿ ಡಾ.ಕಾನೂರಿ ರಾಮಚಂದ್ರರಾವ್ ಸಹ ವೈದ್ಯರಾಗಿದ್ದು, ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ.

ಕಳೆದ ತಿಂಗಳು ಡಲ್ಲಾಸ್‌ನಲ್ಲಿ ನಡೆದ ಗುಂಟೂರು ಮೆಡಿಕಲ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ಸಭೆಯಲ್ಲಿ ಡಾ.ಉಮಾ ಅವರು ಜಿಜಿಹೆಚ್‌ಗೆ ಬೃಹತ್ ದೇಣಿಗೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕೈಯಲ್ಲಿ ಒಂದು ಡಾಲರ್ ಕೂಡ ಇಟ್ಟುಕೊಳ್ಳದೆ ತನ್ನ ಮತ್ತು ತನ್ನ ಗಂಡನ ಪರವಾಗಿ ತನ್ನೆಲ್ಲ ಸಂಪತ್ತನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಇದಕ್ಕೂ ಮುನ್ನ 2008ರಲ್ಲಿ ‘ಜಿಮಖಾನಾ’ ಅಧ್ಯಕ್ಷೆಯಾಗಿ ಅವರು ಸೇವೆ ಸಲ್ಲಿಸಿದ್ದರು. ಅವರ ದೇಣಿಗೆಯಿಂದ ನಿರ್ಮಾಣವಾಗುತ್ತಿರುವ ಜಿಜಿಎಚ್‌ನ ಶಿಶ ಅವರ ಹೆಸರಿಡಲಾಗುವುದು ಎಂದು ಜಿಮಖಾನಾ ಸದಸ್ಯರು ಹೇಳಿದ್ದರು. ಆದರೆ, ಈ ಪ್ರಸ್ತಾವನೆಯನ್ನು ಡಾ.ಉಮಾ ಗವಿನಿ ತಿರಸ್ಕರಿಸಿದ್ದರು. ಇದರಿಂದ ದಿವಂಗತ ಪತಿ ಡಾ.ಕಾನೂರಿ ರಾಮಚಂದ್ರರಾವ್ ಅವರ ಹೆಸರನ್ನು ಇಡಲು ಸದಸ್ಯರು ನಿರ್ಧರಿಸಿದ್ದಾರೆ. ಡಾ.ಕಾನೂರಿ ರಾಮಚಂದ್ರರಾವ್ ಅವರು ಕರ್ನಾಟಕದ ಕಲಬುರಗಿಯಲ್ಲಿ ಅರಿವಳಿಕೆ ತಜ್ಞರಾಗಿ ಕೆಲಸ ಮಾಡುತ್ತಿದ್ದರು.

ಡಾ.ಉಮಾ ಅವರ ದೇಣಿಗೆ ಇತರ ಅನೇಕ ವೈದ್ಯರಿಗೂ ಪ್ರೇರಿತವಾಗಿದೆ. ಡಾ.ಮೊವ್ವ ವೆಂಕಟೇಶ್ವರಲು ಎಂಬುವವರು ಸಹ 20 ಕೋಟಿ ರೂ., ಡಾ.ಸೂರಪನೇನಿ ಕೃಷ್ಣಪ್ರಸಾದ್ ಎಂಬುವವರು 8 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ತೆಲ್ಲ ನಳಿನಿ ಮತ್ತು ವೆಂಕಟ್ ಎಂಬ ದಂಪತಿ ಸಹ 8 ಕೋಟಿ ನೀಡಲು ಮುಂದೆ ಬಂದಿದ್ದಾರೆ. ಕೆಲ ಮಾಜಿ ವಿದ್ಯಾರ್ಥಿಗಳು ಸಹ ದೇಣಿಗೆಯ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ತಾಯಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 86 ಕೋಟಿ ರೂ.ಗಳ ದೇಣಿಗೆ ರೂಪದಲ್ಲಿ ಸಂಗ್ರಹವಾಗಲಿದೆ.

ಇದನ್ನೂ ಓದಿ:ಪಕ್ಷದ ಕಾರ್ಯಕರ್ತನನ್ನು ವರಿಸಿದ ​ಶಾಸಕಿ ನರಿಂದರ್ ಕೌರ್!

ABOUT THE AUTHOR

...view details