ಕರ್ನಾಟಕ

karnataka

By

Published : May 12, 2022, 11:08 PM IST

ETV Bharat / bharat

ತಾಜ್​ಮಹಲ್​ನ 22 ಬಾಗಿಲು ತೆರೆಸಲು ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್​ ಕೋರ್ಟ್​

ವಿಶ್ವವಿಖ್ಯಾತ ತಾಜ್​ಮಹಲ್‌ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಇದನ್ನು ಇತಿಹಾಸಕಾರರ ವಿವೇಚನೆಗೆ ಬಿಡಿ ಎಂದಿದೆ.

allahabad-high
ಅಲಹಾಬಾದ್​ ಕೋರ್ಟ್​

ನವದೆಹಲಿ:ವಿಶ್ವವಿಖ್ಯಾತ ತಾಜ್​ಮಹಲ್‌ನಲ್ಲಿ ಮುಚ್ಚಿದ 22 ಕೊಠಡಿಗಳನ್ನು ತೆರೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

ಬಿಜೆಪಿ ಯುವ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್ ಅವರು ಲಖನೌ ಪೀಠದ ಮುಂದೆ ಮನವಿ ಸಲ್ಲಿಸಿದ್ದು, ತಾಜ್ ಮಹಲ್​ನಲ್ಲಿರುವ 22 ಕೊಠಡಿಗಳಲ್ಲಿ ಏನಿದೆ ಎಂಬುದನ್ನು ತನಿಖೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದರು.

ಈ ಸಮಸ್ಯೆ ನ್ಯಾಯಾಲಯದ ಪರಿಮಿತಿಯ ಆಚಿನದು. ವಿವಿಧ ವಿಧಾನಗಳ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು. ಇದನ್ನು ಇತಿಹಾಸಕಾರರಿಗೆ ವಿವೇಚನೆಗೆ ಬಿಡಿ. ಇಂತಹ ಚರ್ಚೆಗಳು ಡ್ರಾಯಿಂಗ್ ರೂಮ್​ನಲ್ಲಿಯೇ ಮುಗಿಸಬೇಕೆ ಹೊರತು, ನ್ಯಾಯಾಲಯದಲ್ಲಲ್ಲ ಎಂದು ನ್ಯಾಯಾಲಯ ಹೇಳಿದೆ.

ಮೊಘಲರ ಕಾಲದ ಸ್ಮಾರಕವನ್ನು ಭಾರತೀಯ ಪುರಾತತ್ವ ಇಲಾಖೆಯು ರಕ್ಷಿಸಿದೆ. ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಸಮಾಧಿಯಾಗಿ ನಿರ್ಮಿಸಿದ್ದಾನೆ. ಅಮೃತಶಿಲೆಯಿಂದ ಕಟ್ಟಲಾದ ಈ ಪ್ರೀತಿಯ ಸ್ಮಾರಕ 1632 ರಲ್ಲಿ ಪ್ರಾರಂಭವಾಗಿ 1653 ರಲ್ಲಿ ಪೂರ್ಣಗೊಂಡಿದೆ. ಇದಕ್ಕೂ ಮೊದಲು ಇಲ್ಲಿ ಹಿಂದು ದೇವಾಲಯಗಳು ಇದ್ದವು ಎಂಬುದು ವಾದವಾಗಿದೆ.

ಓದಿ:ತಾಜ್​ಮಹಲ್ ಅನ್ನೂ ಬಿಡದ ಕೊರೊನಾ : ಮಾರ್ಚ್​31ರವರೆಗೆ ಪ್ರೇಮಸೌಧದ ಬಾಗಿಲು ಬಂದ್​​

ABOUT THE AUTHOR

...view details