ಕರ್ನಾಟಕ

karnataka

ETV Bharat / bharat

2 ತಿಂಗಳು ಆರೋಪಿಗಳನ್ನು ಬಂಧಿಸುವಂತಿಲ್ಲ: ವರದಕ್ಷಿಣೆ ಕಿರುಕುಳ ಕೇಸ್​ ಕುರಿತು ಮಹತ್ವದ ಆದೇಶ - ಹೈಕೋರ್ಟ್

ಎರಡು ತಿಂಗಳ ಕೂಲಿಂಗ್ ಪೀರಿಯೆಡ್​ ನಲ್ಲಿ ಕೌಟುಂಬಿಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನಗಳು ನಡೆಯಲಿ. ದೂರು ದಾಖಲಾಗುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಯನ್ನು ಕುಟುಂಬದ ಬಳಿಗೆ ಕಳುಹಿಸಬೇಕು. ಈ ಸಮಿತಿಯು ಸಮಗ್ರ ವರದಿಯನ್ನು ತಯಾರಿಸಿ ಅದನ್ನು ಕೋರ್ಟ್ ಹಾಗೂ ಪೊಲೀಸರಿಗೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

allahabad-high-court-order-not-to-arrest-for-two-months-in-dowry-harassment-case
allahabad-high-court-order-not-to-arrest-for-two-months-in-dowry-harassment-case

By

Published : Jun 15, 2022, 2:26 PM IST

ಪ್ರಯಾಗರಾಜ್: ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಕಾಯ್ದೆ 498ಎ ಇದರ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಐಪಿಸಿ 498ಎ ಅಡಿ ದಾಖಲಾದ ಯಾವುದೇ ಪ್ರಕರಣಗಳಲ್ಲಿ ಎರಡು ತಿಂಗಳುಗಳವರೆಗೆ ಯಾರನ್ನೂ ಬಂಧಿಸುವಂತಿಲ್ಲ. ಈ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಅವರು ಆದೇಶ ನೀಡಿದ್ದಾರೆ.

ಪ್ರಾಥಮಿಕ ದೂರು ದಾಖಲಾದ ನಂತರ ಎರಡು ತಿಂಗಳವರೆಗೆ ಪೊಲೀಸರು ಕೂಡ ಯಾವುದೇ ಕಠೋರ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಈ ಎರಡು ತಿಂಗಳ ಕೂಲಿಂಗ್ ಪೀರಿಯೆಡ್​ ನಲ್ಲಿ ಕೌಟುಂಬಿಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನಗಳು ನಡೆಯಲಿ. ದೂರು ದಾಖಲಾಗುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಯನ್ನು ಕುಟುಂಬದ ಬಳಿಗೆ ಕಳುಹಿಸಬೇಕು. ಈ ಸಮಿತಿಯು ಸಮಗ್ರ ವರದಿಯನ್ನು ತಯಾರಿಸಿ ಅದನ್ನು ಕೋರ್ಟ್ ಹಾಗೂ ಪೊಲೀಸರಿಗೆ ಸಲ್ಲಿಸಬೇಕು.

ಸಮಿತಿಯು ವರದಿ ಸಲ್ಲಿಸಿದರೂ ಸಮಿತಿಯ ಯಾವುದೇ ಸದಸ್ಯರನ್ನು ಪ್ರಕರಣದ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಕರೆಯುವಂತಿಲ್ಲ ಎಂದೂ ಅಲಹಾಬಾದ್ ಹೈಕೋರ್ಟ್ ಹೇಳಿದೆ.

ABOUT THE AUTHOR

...view details