ಕರ್ನಾಟಕ

karnataka

ETV Bharat / bharat

ಎಲ್ಲ ಶಾಲಾ - ಕಾಲೇಜು​​, ಅಂಗನವಾಡಿ ಕೇಂದ್ರಗಳು ಸೆ. 1ರಿಂದ ಪುನಾರಂಭ.. ತೆಲಂಗಾಣ ಸಿಎಂ ಮಹತ್ವದ ಘೋಷಣೆ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸೆಪ್ಟೆಂಬರ್​ 1ರಿಂದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ.

By

Published : Aug 23, 2021, 9:12 PM IST

KCR
KCR

ಹೈದರಾಬಾದ್​: ದೇಶದಲ್ಲಿನ ಎರಡನೇ ಹಂತದ ಕೋವಿಡ್​​ ಅಲೆ ಇದೀಗ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವ ಕಾರಣ ಕೆಲವೊಂದು ರಾಜ್ಯಗಳು ಹಂತ ಹಂತವಾಗಿ ಶಾಲಾ-ಕಾಲೇಜು​ ಸೇರಿದಂತೆ ಶೈಕ್ಷಣಿಕ ಸಂಸ್ಥೆ ರೀ ಓಪನ್ ಮಾಡುತ್ತಿವೆ. ಇದೀಗ ತೆಲಂಗಾಣ ಸರ್ಕಾರ ಕೂಡ ಮಹತ್ವದ ನಿರ್ಧಾರ ಕೈಗೊಂಡಿದೆ.

ಸೆಪ್ಟೆಂಬರ್​ 1ರಿಂದ ರಾಜ್ಯದಲ್ಲಿನ ಎಲ್ಲ ಶಾಲೆ, ಕಾಲೇಜು ಜೊತೆಗೆ ಅಂಗನವಾಡಿ ಕೇಂದ್ರಗಳನ್ನ ಪುನಾರಂಭ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ತದನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.

ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸೆಪ್ಟೆಂಬರ್ 1ರಿಂದ ಪುನಾರಂಭಗೊಳ್ಳಲಿದ್ದು, ಮಕ್ಕಳು ಈ ಹಿಂದಿನಂತೆ ಶಾಲಾ ತರಗತಿಗಳಿಗೆ ಹಾಜರಾಗಲಿದ್ದಾರೆ ಎಂದರು.

ತೆಲಂಗಾಣ ಸಿಎಂ ಮಹತ್ವದ ಘೋಷಣೆ

ಕೋವಿಡ್​ನಿಂದಾಗಿ ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಾಲಾ ಶಿಕ್ಷಕರು ಇನ್ನಿಲ್ಲದ ತೊಂದರೆ ಅನುಭವಿಸಿದ್ದು, ಇದೀಗ ಎಲ್ಲವೂ ಪುನಾರಂಭಗೊಳ್ಳಲಿರುವ ಕಾರಣ ಎಲ್ಲವೂ ಸರಿಯಾಗಲಿದೆ ಎಂದರು. ಸತತವಾಗಿ ಶಾಲೆಗಳು ಬಂದ್​ ಆಗಿದ್ದರೆ ವಿದ್ಯಾರ್ಥಿಗಳು ದೈಹಿಕ ಸಮಸ್ಯೆ ಎದುರಿಸಲಿದ್ದು, ಇದೀಗ ನಾವು ಶಾಲೆ ಪುನಾರಂಭ ಮಾಡಲು ಮುಂದಾಗಿದ್ದೇವೆ ಎಂದರು.

ಶಾಲೆಗಳಿಗೆ ಸಂಪೂರ್ಣವಾಗಿ ಸ್ಯಾನಟೈಸ್​​ ಮಾಡುವ ಜವಾಬ್ದಾರಿ ಅಧಿಕಾರಿಗಳಿಗೆ ನೀಡಲಾಗಿದ್ದು, ಆಗಸ್ಟ್​ 30ರೊಳಗಾಗಿ ಎಲ್ಲ ಶಾಲೆ, ಕಾಲೇಜು​, ಶೈಕ್ಷಣಿಕ ಸಂಸ್ಥೆಗಳು ಸ್ಯಾನಿಟೈಸ್​ ಆಗಲಿವೆ. ಮುನ್ಸಿಪಲ್​ ಹಾಗೂ ಪಂಚಾಯತ್​ ರಾಜ್​ಗಳು ಇದರ ಬಗ್ಗೆ ನಿಗಾವಹಿಸಲಿವೆ ಎಂದರು.

ಇದನ್ನೂ ಓದಿರಿ:ಮೊದಲ ದಿನವೇ ಶಾಲೆ ಬಾಗಿಲು ತಟ್ಟಿದ 3 ಲಕ್ಷ ವಿದ್ಯಾರ್ಥಿಗಳು: ಕೆಲವು ಜಿಲ್ಲೆಯಲ್ಲಿ ಆನ್​​ಲೈನ್ ಕ್ಲಾಸ್​​ಗೂ ಬಾರದ ಸ್ಟುಡೆಂಟ್ಸ್​​​

ಕರ್ನಾಟಕದಲ್ಲೂ ಇಂದಿನಿಂದಲೇ 9ರಿಂದ 12ನೇ ತರಗತಿ ಕ್ಲಾಸ್​ಗಳು ಆರಂಭವಾಗಿದ್ದು, ಮೊದಲ ದಿನವೇ 3 ಲಕ್ಷ ವಿದ್ಯಾರ್ಥಿಗಳು ಶಾಲೆಯ ಬಾಗಿಲು ತಟ್ಟಿದ್ದಾರೆ.

ABOUT THE AUTHOR

...view details