ಕರ್ನಾಟಕ

karnataka

ETV Bharat / bharat

ಸೋಲು..ಸೋಲು..ಸೋಲು..ಮಾಜಿ ಎಂಎಲ್ಸಿ ಕೈಲಾಶ್ ಸಿಂಗ್ ಸೇರಿ ನಾಲ್ವರು ಸದಸ್ಯರನ್ನು ವಜಾಗೊಳಿಸಿದ ಯಾದವ್​!

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗಾಜಿಪುರದಲ್ಲಿ ನಡೆದ ಎಂಎಲ್‌ಸಿ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವಿರುದ್ಧ ವಿರೋಧ ಚಟುವಟಿಕೆ ನಡೆಸಿದ್ದ ನಾಲ್ಕು ಪಕ್ಷದ ಸದಸ್ಯರನ್ನು ಉಚ್ಚಾಟಿಸಿದ್ದಾರೆ.

By

Published : Mar 30, 2022, 10:00 AM IST

Akhilesh Yadav sacks party members  Samajwadi Party meeting about Ghazipur mlc election lost  MLC Kailash Singh  Akhilesh Yadav  Akhilesh Yadav expelled party members  ಮಾಜಿ ಎಂಎಲ್ಸಿ ಕೈಲಾಶ್ ಸಿಂಗ್ ಸೇರಿ ಪಕ್ಷದ ನಾಲ್ವರು ಸದಸ್ಯರು ವಜಾ  ಘಾಜಿಪುರ ಎಂಎಲ್​ಸಿ ಚುನಾವಣೆ ಸೋಲು ಕುರಿತು ಸಮಾಜವಾದಿ ಪಕ್ಷ  ಪಕ್ಷದ ಸದಸ್ಯರನ್ನು ಉಚ್ಚಾಟಿಸಿದ ಅಖಿಲೇಶ್​ ಯಾದವ್​ ಉತ್ತರಪ್ರದೇಶ ಎಂಎಲ್​ಸಿ ಚುನಾವಣೆ
ಮಾಜಿ ಎಂಎಲ್ಸಿ ಕೈಲಾಶ್ ಸಿಂಗ್ ಸೇರಿ ಪಕ್ಷದ ನಾಲ್ವರು ಸದಸ್ಯರನ್ನು ವಜಾಗೊಳಿಸಿದ ಯಾದವ್

ಲಖನೌ (ಉತ್ತರ ಪ್ರದೇಶ):ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಗಾಜಿಪುರದಲ್ಲಿ ನಡೆದ ಎಂಎಲ್‌ಸಿ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ವಿರೋಧಿಸಿದ್ದಕ್ಕಾಗಿ ನಾಲ್ವರು ಸದಸ್ಯರನ್ನು ಉಚ್ಚಾಟಿಸಿದ್ದಾರೆ. ಯಾದವ್ ಮಂಗಳವಾರ ಪಕ್ಷದ ಮಿತ್ರಪಕ್ಷಗಳಾದ ಅಪ್ನಾ ದಳ (ಕೆ), ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮತ್ತು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ನಾಯಕರೊಂದಿಗೆ ಸಭೆ ನಡೆಸಿ ಸೋಲಿಗೆ ಕಾರಣವೇನೆಂಬುದರ ಬಗ್ಗೆ ಚರ್ಚೆ ನಡೆಸಿದರು.

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಾಬಾ ಸಾಹೇಬ್ ವಾಹಿನಿ, ರಮೇಶ್ ಯಾದವ್, ವಿಜಯ್ ಯಾದವ್, ಗಾಜಿಪುರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ಯಾದವ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಬಗ್ಗೆ ಸಮಾಜವಾದಿ ಪಕ್ಷ ಪತ್ರದ ಮೂಲಕ ಮಾಹಿತಿ ನೀಡಿದೆ.

ಓದಿ:ಭಾರತ ಪ್ರವಾಸ: ಅಮೆರಿಕ ಪ್ರಜೆಗಳ ಪ್ರಯಾಣದ ಸೂಚನೆ ಪರಿಷ್ಕರಣೆ, ಆದರೂ ಜಾಗರೂಕ ಎಂದು ಸಲಹೆ

ಜಸ್ವಂತ್ ನಗರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಅಖಿಲೇಶ್ ಅವರ ಚಿಕ್ಕಪ್ಪ, ಉತ್ತರ ಪ್ರದೇಶದ ಶಾಸಕ ಮತ್ತು ಪ್ರಗತಿಶೀಲ ಸಮಾಜವಾದಿ ಪಕ್ಷದ (ಪಿಎಸ್‌ಪಿ) ನಾಯಕ ಶಿವಪಾಲ್ ಯಾದವ್ ಸಭೆಗೆ ಹಾಜರಾಗಿರಲಿಲ್ಲ. ಶಿವಪಾಲ್ ಯಾದವ್ ಜೊತೆಗೆ ಅಪ್ನಾ ದಳ (ಕೆ) ನಾಯಕಿ ಪಲ್ಲವಿ ಪಟೇಲ್ ಕೂಡ ಸಭೆಗೆ ಹಾಜರಾಗಿರಲಿಲ್ಲ. ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಮತ್ತು ಆರ್‌ಎಲ್‌ಡಿ ಶಾಸಕಾಂಗ ಪಕ್ಷದ ನಾಯಕ ರಾಜ್‌ಪಾಲ್ ಬಲಿಯಾನ್ ಅಖಿಲೇಶ್ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಸೋಲಿನ ಬಗ್ಗೆ ಚರ್ಚೆ ನಡೆಸಲಾಯಿತು. ಸದನದಲ್ಲಿ ಸಾಮಾನ್ಯ ಜನರ ಬಗ್ಗೆ ಯಾವರೀತಿ ಧ್ವನಿ ಎತ್ತಬೇಕು ಮತ್ತು ಬಡ ಕೂಲಿ ಕಾರ್ಮಿಕರ ಉದ್ಯೋಗ ಸಮಸ್ಯೆ ಕುರಿತು ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಬಲಿಯಾನ್ ಮಾಧ್ಯಮಕ್ಕೆ ತಿಳಿಸಿದರು. ಸಭೆಗೆ ಶಿವಪಾಲ್ ಯಾದವ್ ಗೈರುಹಾಜರಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ನಾವೆಲ್ಲರೂ ಒಟ್ಟಿಗೆ ಇದ್ದೇವೆ ಎಂದರು.

ಓದಿ:9 ದಿನದಲ್ಲಿ 8ನೇ ಬಾರಿಗೆ ಪೆಟ್ರೋಲ್​​​- ಡೀಸೆಲ್​ ಬೆಲೆ ಏರಿಕೆ.. 150ಕ್ಕೆ ತಲುಪುತ್ತಾ ತೈಲ ದರ?

ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದಲ್ಲಿ 403 ವಿಧಾನಸಭಾ ಸ್ಥಾನಗಳಲ್ಲಿ 255 ಸ್ಥಾನಗಳನ್ನು ಗೆಲ್ಲುವ ಮೂಲಕ ಸತತ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಂಡಿದೆ. ಎಸ್‌ಪಿ 111 ಸ್ಥಾನಗಳನ್ನು ಪಡೆದು ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಿದೆ.

ABOUT THE AUTHOR

...view details