ಕರ್ನಾಟಕ

karnataka

ETV Bharat / bharat

ಆರೋಪಿಗೆ ತಪ್ಪಿಸಿಕೊಳ್ಳುವ ಉಪಾಯ ನೀಡಿದ ಪೊಲೀಸ್​ ಅಧಿಕಾರಿ, ಬಳಿಕ ಇಲ್ಲ ಎಂದು ಸಮಜಾಯಿಷಿ - ಅಜ್ಮೀರ್​ ದರ್ಗಾದ ಸಲ್ಮಾನ್​ ಚಿಸ್ತಿಗೆ ಸಲಹೆ

ನೂಪುರ್​ ಶರ್ಮಾರ ತಲೆ ಕಡಿಯಲು ಸುಪಾರಿ ನೀಡಿದ್ದ ಆರೋಪಿಗೆ ಪೊಲೀಸ್ ಅಧಿಕಾರಿಯೇ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸಲಹೆ ನೀಡಿದ ವಿಡಿಯೋ ವೈರಲ್​ ಆಗಿದೆ. ಆದರೆ ಇದನ್ನು ಅಧಿಕಾರಿ ನಿರಾಕರಿಸಿದ್ದಾರೆ.

ಆರೋಪಿಗೇ ತಪ್ಪಿಸಿಕೊಳ್ಳುವ ಉಪಾಯ ನೀಡಿದ ಪೊಲೀಸ್​, ಬಳಿಕ ಇಲ್ಲ ಎಂದು ಸಮಜಾಯಿಷಿ
ಆರೋಪಿಗೇ ತಪ್ಪಿಸಿಕೊಳ್ಳುವ ಉಪಾಯ ನೀಡಿದ ಪೊಲೀಸ್​, ಬಳಿಕ ಇಲ್ಲ ಎಂದು ಸಮಜಾಯಿಷಿ

By

Published : Jul 7, 2022, 12:26 PM IST

ರಾಜಸ್ಥಾನ:ಪ್ರವಾದಿ ಬಗ್ಗೆ ಹೇಳಿಕೆ ನೀಡಿದ ನೂಪುರ್ ಶರ್ಮಾರ ಶಿರಚ್ಛೇದ ಮಾಡಿದಲ್ಲಿ ತನ್ನ ಮನೆ, ಆಸ್ತಿ ನೀಡುವುದಾಗಿ ಘೋಷಿಸಿದ್ದ ಅಜ್ಮೀರ್​ ದರ್ಗಾದ ಮುಖ್ಯಸ್ಥನಿಗೆ ಆರೋಪದಿಂದ ತಪ್ಪಿಸಿಕೊಳ್ಳಲು ಪೊಲೀಸ್​ ಅಧಿಕಾರಿಯೇ ಉಪಾಯ ಹೇಳಿಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್‌ ಆಗಿದೆ. ಆದರೆ, ಈ ಆರೋಪವನ್ನು ಪೊಲೀಸ್​ ಅಧಿಕಾರಿ ತಳ್ಳಿ ಹಾಕಿದರು.

ಅಜ್ಮೀರ್​ ದರ್ಗಾದ ಮುಖ್ಯಸ್ಥ ಸಲ್ಮಾನ್​ ಚಿಸ್ತಿಯನ್ನು ಪೊಲೀಸರು ಮೊನ್ನೆ ರಾತ್ರಿ ಬಂಧಿಸಿ ಕರೆದುಕೊಂಡು ಬರುತ್ತಿದ್ದಾಗ, "ನೀವು ಪ್ರಚೋದನಾತ್ಮಕ ವಿಡಿಯೋ ಮಾಡುವಾಗ ಯಾವ ಮದ್ಯ ಕುಡಿದಿದ್ದೀರಾ" ಎಂದು ಕೇಳಿದ್ದಾರೆ. ಬಳಿಕ "ಪ್ರಕರಣದಿಂದ ಪಾರಾಗಲು ನಾನು ಆ ಸಮಯದಲ್ಲಿ ಕುಡಿದಿದ್ದಾಗಿ ಹೇಳು" ಎಂದು ಪೊಲೀಸ್​ ಅಧಿಕಾರಿ ಸಲಹೆ ನೀಡುತ್ತಿರುವುದು ವಿಡಿಯೋದಲ್ಲಿದೆ.

ಈ ವಿಡಿಯೋವನ್ನು ಬಿಜೆಪಿ ಟ್ವೀಟ್​ ಮಾಡಿದ್ದು, ಇದು ರಾಜಸ್ಥಾನ ಸರ್ಕಾರದ ಕಾನೂನುಪಾಲನೆಯಾಗಿದೆ. ಆರೋಪಿಗಳಿಗೆ ಸಹಾಯ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ. ಈ ಆರೋಪಿ ವಿಡಿಯೋ ವೈರಲ್​ ಆದ ಬಳಿಕ ಸಲಹೆ ನೀಡಿದ್ದ ಪೊಲೀಸ್​ ಅಧಿಕಾರಿ ಇದನ್ನು ಅಲ್ಲಗಳೆದಿದ್ದಾರೆ. ಆ ರೀತಿಯಾಗಿ ನಾನು ಹೇಳಿಲ್ಲ. ಅದು ತನಿಖೆಯ ಭಾಗ ಎಂದು ಹೇಳಿಕೊಂಡಿದ್ದಾರೆ.

ಟೈಲರ್​ ಕನ್ಹಯ್ಯಾ ಲಾಲ್​ ಹತ್ಯೆ ಬಳಿಕ ಅಜ್ಮೀರ್​ ದರ್ಗಾದ ಸಲ್ಮಾನ್​ ಚಿಸ್ತಿ ವಿಡಿಯೋ ಮಾಡಿ, ಅದರಲ್ಲಿ ನೂಪುರ್​ ಶರ್ಮಾರ ತಲೆಯನ್ನು ಕತ್ತರಿಸಿ ತಂದವರಿಗೆ ನನ್ನ ಮನೆ, ಆಸ್ತಿಯನ್ನು ನೀಡುವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದೀಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಇದನ್ನೂ ಓದಿ:10 ತಿಂಗಳ ಹೆಣ್ಣು ಮಗುವಿಗೆ ಭಾರತೀಯ ರೈಲ್ವೇ ಇಲಾಖೆಯಲ್ಲಿ ಕೆಲಸ!

ABOUT THE AUTHOR

...view details