ಕರ್ನಾಟಕ

karnataka

By

Published : Apr 17, 2023, 10:05 PM IST

ETV Bharat / bharat

ಪುಣೆ ರ‍್ಯಾಲಿ ರದ್ದುಗೊಳಿಸಿದ ಅಜಿತ್ ಪವಾರ್: ಊಹಾಪೋಹಗಳಿಗೆ ತೆರೆ

ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪುಣೆ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ್ದಾರೆ.

Ajit Pawar
ಅಜಿತ್ ಪವಾರ್

ಪುಣೆ (ಮಹಾರಾಷ್ಟ್ರ):ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪುಣೆಯ ಕಾರ್ಯಕ್ರಮವನ್ನು ದಿಢೀರ್ ರದ್ದುಗೊಳಿಸಿದ್ದಾರೆ. ಮಹಾರಾಷ್ಟ್ರದ ಇಬ್ಬರು ಉನ್ನತ ಬಿಜೆಪಿ ನಾಯಕರು ದೆಹಲಿಗೆ ಭೇಟಿ ನೀಡಿದ್ದು, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಯೋಜನೆಗಳ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ಸದ್ಯ ತೆರೆ ಬಿದ್ದಂತಾಗಿದೆ. ಮಿತ್ರಪಕ್ಷ ಎನ್‌ಸಿಪಿಯಲ್ಲಿ ಬಿರುಕು ಮೂಡುವ ಸಾಧ್ಯತೆಯನ್ನು ಶಿವಸೇನೆ(ಯುಬಿಟಿ) ಮತ್ತೊಮ್ಮೆ ತಳ್ಳಿಹಾಕಿದೆ. ಏಕನಾಥ್ ಶಿಂಧೆ ನೇತೃತ್ವದ ಸೇನೆಯು ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸಿದರೆ, ಅದು ರಾಜ್ಯ ಸರ್ಕಾರವನ್ನು ಬಲಪಡಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಂಜಯ್ ರಾವುತ್ ಹೇಳಿದ್ದೇನು?: ''ಭಾನುವಾರ ನಾಗ್ಪುರದಲ್ಲಿ ನಡೆದ ಎಂವಿಎ (ಮಹಾ ವಿಕಾಸ್ ಅಘಾಡಿ) ರ‍್ಯಾಲಿಯಲ್ಲಿ ಅಜಿತ್ ಪವಾರ್ ನಮ್ಮೊಂದಿಗಿದ್ದರು. ಅವರು ಉನ್ನತ ಎಂವಿಎ ನಾಯಕರೊಂದಿಗೆ ವೇದಿಕೆ ಹಂಚಿಕೊಂಡರು. ನಾವು ಅದೇ ವಿಮಾನದಲ್ಲಿ ಹಿಂದಿರುಗಿದ್ದೆವು ಮತ್ತು (ಎನ್‌ಸಿಪಿಯಿಂದ ಅವರ ವಿಭಜನೆಯ ಕುರಿತು) ಹರಡಿರುವ ವದಂತಿಗಳ ಬಗ್ಗೆಯೂ ಮಾತನಾಡಿದೆವು. ಅಜಿತ್ ಪವಾರ್ ಅವರು ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ತಮ್ಮ ಪಕ್ಷವು ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ" ಎಂದು ರಾವುತ್ ಹೇಳಿದರು.

ಎಂವಿಎ ರ‍್ಯಾಲಿಯ ನಂತರ ಅದರ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಜಿತ್ ಪವಾರ್, ನನ್ನ ಬಗೆಗಿನ ಸುದ್ದಿ ಕೇಳಿ ನಕ್ಕು ಸುಮ್ಮನಾದೆ ಎಂದರು. ಭಾನುವಾರ ಮುಂಬೈನಲ್ಲಿ ಸಂಭವಿಸಿದ ಅಗ್ನಿ ದುರಂತದ ಕಾರಣದಿಂದ ಅವರು, ಸೋಮವಾರ ಪುಣೆಯಲ್ಲಿ ನಡೆಯಬೇಕಿದ್ದ ತಮ್ಮ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಶೇಕರ್ ಬವಾಂಕುಲೆ ಮತ್ತು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೇಲಾರ್ ಸೋಮವಾರ ದೆಹಲಿಗೆ ತೆರಳಿದರು. ''ಆಡಳಿತಾತ್ಮಕ ಕೆಲಸ" ಮತ್ತು "ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂಬ ಕಾರಣಕ್ಕಾಗಿ ಭೇಟಿ ಮಾಡಲಾಗಿದೆ ಎಂದು ಬವಾಂಕುಲೆ ಸುದ್ದಿಗಾರರಿಗೆ ತಿಳಿಸಿದರು.

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣ:ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್​ಸಿಬಿ) ಹಗರಣದಲ್ಲಿ ಜಾರಿ ನಿರ್ದೇಶನಾಲಯವು ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಅಜಿತ್‌ಗೆ ಸಂಬಂಧಿಸಿದ ವದಂತಿಗಳು ಹೊರಹೊಮ್ಮಲು ಪ್ರಾರಂಭಿಸಿದವು. ಇದರಲ್ಲಿ ಅಜಿತ್ ಪವಾರ್ ಮತ್ತು ಅವರ ಪತ್ನಿಯನ್ನು ಆರೋಪಿಗಳೆಂದು ಹೆಸರಿಸಲಾಗಿಲ್ಲ. ಕೆಲವು ಸಮಯದಿಂದ, ಅಜಿತ್ ಶಿವಸೇನಾ-ಬಿಜೆಪಿ ಸರ್ಕಾರದ ಬಗ್ಗೆ, ವಿಶೇಷವಾಗಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬಗ್ಗೆ ಮೃದುಧೋರಣೆ ತಳೆದಿದ್ದಾರೆ. 2019ರ ಅಸೆಂಬ್ಲಿ ಚುನಾವಣೆಯ ನಂತರ, ಅಜಿತ್ ಅವರು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಫಡ್ನವಿಸ್ ಅವರೊಂದಿಗೆ ಕೈಜೋಡಿಸಿದರು. ಇದನ್ನು ಅವರ ವಿರೋಧಿಗಳು ಮಾತ್ರ ಇನ್ನೂ ಮರೆತಿಲ್ಲ.

ಇದನ್ನೂ ಓದಿ:ವಿದೇಶಿ ಭಾಷೆ ಕಲಿಯಲು ಪ್ರೋತ್ಸಾಹ: ಅಲ್ಪಸಂಖ್ಯಾತರಿಗೆ ರಾಜಸ್ಥಾನ ಸರ್ಕಾರದಿಂದ ಮಾಸಿಕ 1,500 ರೂ. ಭತ್ಯೆ

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರತಿಕ್ರಿಯೆ:ಅಜಿತ್ ಅವರ ಪಕ್ಷಾಂತರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, "ನನಗೆ ಇದರ ಬಗ್ಗೆ ಯಾವುದೇ ಸುಳಿವು ಇಲ್ಲ. ನಾನು ನಿಷ್ಪ್ರಯೋಜಕ ಗಾಸಿಪ್‌ನಲ್ಲಿ ತೊಡಗುವುದಿಲ್ಲ" ಎಂದರು. ಆದ್ರೆ ಕಳೆದ ವಾರ ಮಾತ್ರ, ನಿಗೂಢವಾದ ಪ್ರತಿಕ್ರಿಯೆಯನ್ನು ಕೊಟ್ಟಿದ್ದ ಸುಳೆ ಅವರು, "ಬಿಸಿಲಿನ ವಾತಾವರಣದ ನಂತರ, ಯಾವಾಗ ಮಳೆಯಾಗುತ್ತದೆ ಎಂದು ನಾನು ಊಹಿಸಲು ಸಾಧ್ಯವಿಲ್ಲ'' ಎಂದಿದ್ದರು.

ಇದನ್ನೂ ಓದಿ:"ಇದು ಪಂಜಾಬ್, ಭಾರತವಲ್ಲ": ಮುಖದ ಮೇಲೆ ತ್ರಿವರ್ಣ ಧ್ವಜ ಹೊಂದಿದ್ದಕ್ಕೆ ಪ್ರವೇಶ ನಿರಾಕರಣೆ​

ABOUT THE AUTHOR

...view details