ಕರ್ನಾಟಕ

karnataka

By

Published : Feb 22, 2022, 10:47 AM IST

ETV Bharat / bharat

ಭಾರತೀಯರ ಕರೆತರಲು ಉಕ್ರೇನ್‌ನತ್ತ ಹೊರಟ ಏರ್‌ಇಂಡಿಯಾ ವಿಶೇಷ ವಿಮಾನ, 3 ದಿನ ಕಾರ್ಯಾಚರಣೆ

ಉಕ್ರೇನ್​ನಿಂದ ಭಾರತಕ್ಕೆ ಮರಳಲು ಇಚ್ಚಿಸಿದ ಭಾರತೀಯರನ್ನು ಕರೆತರಲು ಏರ್​ ಇಂಡಿಯಾ ಮೂರು ವಿಮಾನಗಳ ವ್ಯವಸ್ಥೆ ಮಾಡಿದೆ. ಇವು ಫೆಬ್ರವರಿ 22, 24, 26 ರಂದು ಕಾರ್ಯಾಚರಣೆ ನಡೆಸಲಿವೆ ಎಂದು ಏರ್ ಇಂಡಿಯಾ ತಿಳಿಸಿದೆ.

Air India special flight
ಏರ್​ ಇಂಡಿಯಾ ವಿಮಾನ

ನವದೆಹಲಿ:ಉಕ್ರೇನ್​ ಮೇಲೆ ರಷ್ಯಾ ಯುದ್ಧ ಸಾರುವ ಭೀತಿ ದಟ್ಟವಾದ ಹಿನ್ನೆಲೆಯಲ್ಲಿ ಉಕ್ರೇನ್​ನಲ್ಲಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ. ಇಂದು ರಾತ್ರಿ ಉಕ್ರೇನ್​ನಿಂದ ಭಾರತೀಯ ಪ್ರಜೆಗಳನ್ನು ಹೊತ್ತ ಏರ್​ ಇಂಡಿಯಾ ವಿಮಾನ ಭಾರತಕ್ಕೆ ಹಾರಲಿದೆ.

ಉಕ್ರೇನ್​ ತೊರೆಯಲು ಇಚ್ಚಿಸಿ ನೋಂದಾಯಿಸಿಕೊಂಡಿದ್ದ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಟಾಟಾ ಒಡೆತನದ ಏರ್​ ಇಂಡಿಯಾದ ಮೂರು ವಿಮಾನಗಳಲ್ಲಿ ಒಂದು ವಿಮಾನ ಇಂದು ರಾತ್ರಿಯೇ ನಾಗರಿಕರನ್ನು ಕರೆತರಲಿದೆ ಎಂದು ವಿಮಾನಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು.

ಉಕ್ರೇನ್​ನಿಂದ ಭಾರತಕ್ಕೆ ಮರಳಲು ಇಚ್ಚಿಸಿದ ಭಾರತೀಯರನ್ನು ಕರೆತರಲು ಏರ್​ ಇಂಡಿಯಾ ಮೂರು ವಿಮಾನಗಳನ್ನು ವ್ಯವಸ್ಥೆ ಮಾಡಿದೆ. ಇವು ಫೆಬ್ರವರಿ 22, 24, 26 ರಂದು ಕಾರ್ಯಾಚರಣೆ ನಡೆಸಲಿವೆ.

ಇದಲ್ಲದೇ, ದೆಹಲಿಯಿಂದ ಬೋಯಿಂಗ್ ಡ್ರೀಮ್‌ಲೈನರ್ ಬಿ-787 ವಿಮಾನವು ಉಕ್ರೇನ್​ಗೆ ಇಂದು ಹೊರಟಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ: ರಷ್ಯಾ-ಉಕ್ರೇನ್​ ಸಂಯಮ ಕಾಪಾಡಿಕೊಳ್ಳಲು ಭಾರತ ಸಲಹೆ

ABOUT THE AUTHOR

...view details