ಕರ್ನಾಟಕ

karnataka

By

Published : Mar 9, 2023, 6:13 PM IST

ETV Bharat / bharat

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್​ಇಂಡಿಯಾ ಎಕ್ಸ್​ಪ್ರೆಸ್ ನೌಕರನ ಅಮಾನತು

ಕೇರಳದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಒಂದೂವರೆ ಕೆಜಿಯಷ್ಟು ಚಿನ್ನವನ್ನು ಸಾಗಣೆ ಮಾಡುತ್ತಿದ್ದ ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ಉದ್ಯೋಗಿಯೊಬ್ಬರನ್ನು ಕಸ್ಟಮ್ಸ್​ ಇಲಾಖೆ ಅಧಿಕಾರಿಗಳು ಹಿಡಿದಿದ್ದಾರೆ.

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್​ಇಂಡಿಯಾ ಎಕ್ಸ್​ಪ್ರೆಸ್ ನೌಕರನ ಅಮಾನತು
ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್​ಇಂಡಿಯಾ ಎಕ್ಸ್​ಪ್ರೆಸ್ ನೌಕರನ ಅಮಾನತು

ಕೊಚ್ಚಿ (ಕೇರಳ):ಏರ್ ಇಂಡಿಯಾ ಎಕ್ಸ್​ಪ್ರೆಸ್​​ನ ಉದ್ಯೋಗಿಯೊಬ್ಬರು ಅಕ್ರಮವಾಗಿ ಒಂದೂವರೆ ಕೆ ಜಿ ಚಿನ್ನವನ್ನು ಸಾಗಿಸುತ್ತಿದ್ದಾಗ ಕಸ್ಟಮ್ಸ್ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿನ್ನವನ್ನು ಕೈಗೆ ಸುತ್ತಿ ಕಳ್ಳಸಾಗಣೆ ಮಾಡಲು ಯತ್ನಿಸಿದ ಉದ್ಯೋಗಿಯನ್ನ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಕೇರಳದ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಈ ಘಟನೆ ನಡೆದಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಬಹ್ರೇನ್‌ನಿಂದ ಕೋಯಿಕ್ಕೋಡ್ ಮೂಲಕ ಕೊಚ್ಚಿ ವಿಮಾನ ನಿಲ್ದಾಣವನ್ನು ತಲುಪಿದೆ. ಆ ವಿಮಾನದ ಕ್ಯಾಬಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶಫಿ ಎಂಬಾತ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಎಂಬ ರಹಸ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್​ಗೆ ಲಭಿಸಿದೆ. ನಂತರ ಕಸ್ಟಮ್ಸ್ ಅಧಿಕಾರಿಗಳು ಆತನ ಮೇಲೆ ನಿಗಾ ಇಟ್ಟಿದ್ದರು. ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಗ್ರೀನ್ ಚಾನೆಲ್‌ನಿಂದ ಧಾವಿಸಿ ಬಂದ ಶಫಿ ಸಿಕ್ಕಿಬಿದ್ದಾಗ ಈ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ :48ರ ಪ್ರಾಯದ ಮಹಿಳೆ ಮೇಲೆ 22 ವರ್ಷದ ಯುವಕನ ಕ್ರಶ್: ನಂಬರ್ ಬ್ಲಾಕ್ ಮಾಡ್ತೀನಿ ಅಂದಿದ್ದಕ್ಕೇ ಮರ್ಡರ್​ ಮಾಡಿದ ಕ್ಯಾಬ್ ಚಾಲಕ

ಚಿನ್ನದ ಮೌಲ್ಯ 75 ಲಕ್ಷ ರೂ : 1,487 ಗ್ರಾಂ ಚಿನ್ನವನ್ನು ಶಫಿ ಕೈಗೆ ಸುತ್ತಿಕೊಂಡಿದ್ದ. ಕಾಣದಂತೆ ಶರ್ಟ್​ ತೋಳುಗಳಿಂದ ಮುಚ್ಚಿಕೊಂಡಿದ್ದ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ ಚಿನ್ನದ ಮೌಲ್ಯ ಸುಮಾರು 75 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ :ಹೋಳಿಯಲ್ಲಿ ಪ್ರತ್ಯೇಕ ದುರ್ಘಟನೆ: ಡ್ಯಾನ್ಸ್​ ಮಾಡುತ್ತಲೇ ಯುವಕ ಸಾವು, ದಲಿತ ಯವಕರ ಮೇಲೆ ಸಂಸದನ ಸಹೋದರನಿಂದ ಹಲ್ಲೆ ಆರೋಪ

ಏರ್ ಇಂಡಿಯಾ ಎಕ್ಸ್​ಪ್ರೆಸ್​ ಪ್ರಕಟಣೆಯಲ್ಲಿ ಮಾಹಿತಿ: ಘಟನೆ ತಿಳಿದುಬಂದ ಬಳಿಕ ನೌಕರನನ್ನು ತಕ್ಷಣವೇ ಅಮಾನತುಗೊಳಿಸಲಾಯಿತು. ಇಂತಹ ವರ್ತನೆಯನ್ನು ನಮ್ಮ ಸಂಸ್ಥೆ ಎಂದಿಗೂ ಸಹಿಸುವುದಿಲ್ಲ. ತನಿಖಾ ವರದಿಯ ನಂತರ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಇದ್ದಲ್ಲಿ ಆತನನ್ನು ಕರ್ತವ್ಯದಿಂದ ತೆಗೆದುಹಾಕಲು ನಾವು ಹಿಂಜರಿಯುವುದಿಲ್ಲ ಎಂದು ಏರ್ ಇಂಡಿಯಾ ಎಕ್ಸ್​ಪ್ರೆಸ್​ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಸ್ತುತ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಬಣ್ಣ ಎರಚಬೇಡಿ ಎಂದಿದ್ದಕ್ಕೆ ವೃದ್ಧೆಯನ್ನು ಹೊಡೆದು ಕೊಂದೇ ಬಿಟ್ಟರು: ಪಾನಮತ್ತ ಯುವಕರ ದುಷ್ಕೃತ್ಯ

ವಿದೇಶದಿಂದ ವಿಶೇಷವಾಗಿ ದುಬೈನಿಂದ ಜನರು ನಿಗದಿತ ಮಿತಿಗಿಂತ ಹೆಚ್ಚು ಚಿನ್ನವನ್ನು ತರುತ್ತಿರುವ ಅನೇಕ ಘಟನೆಗಳನ್ನು ಸ್ಮರಿಸಬಹುದು. ಹೆಚ್ಚುವರಿ ಚಿನ್ನವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿದಿದ್ದರೂ, ಅವರು ಕಸ್ಟಮ್ಸ್ ಇಲಾಖೆ ಅಧಿಕಾರಿಗಳ ತಪಾಸಣೆ ತಪ್ಪಿಸಲು ವಿವಿಧ ಮಾರ್ಗಗಳನ್ನು ಆರಿಸಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಸಮಯ ಅವರು ಸಿಕ್ಕಿ ಬೀಳುತ್ತಾರೆ.

ಇದನ್ನೂ ಓದಿ :ಜಿ 20 ಸಮ್ಮೇಳನದ ಸಭೆ: ವಾರಾಣಸಿಯಲ್ಲಿ ಬುಲ್ಡೋಜರ್‌ಗಳ ಮೂಲಕ 135 ಅಂಗಡಿಗಳ ನೆಲಸಮ

ABOUT THE AUTHOR

...view details