ಕರ್ನಾಟಕ

karnataka

ನರೋಡಾ ಹತ್ಯಾಕಾಂಡ ತೀರ್ಪು ಇಂದು: ಏನಾಗುತ್ತೆ 64 ಜನರ ಹಣೆಬರಹ?

By

Published : Apr 20, 2023, 10:36 AM IST

ಗೋದ್ರಾ ಗಲಭೆಯ ನಂತರ ನಡೆದ ನರೋಡಾ ಹತ್ಯಾಕಾಂಡ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಎಸ್​ಐಟಿ ವಿಶೇಷ ನ್ಯಾಯಾಲಯ ಆದೇಶ ನೀಡಲಿದೆ.

ನರೋಡಾ ಹತ್ಯಾಕಾಂಡ ತೀರ್ಪು
ನರೋಡಾ ಹತ್ಯಾಕಾಂಡ ತೀರ್ಪು

ಅಹಮದಾಬಾದ್​​(ಗುಜರಾತ್​):ಗೋದ್ರಾ ಘಟನೆಯ ನಂತರ ಅಹಮದಾಬಾದ್‌ನ ನರೋಡಾದಲ್ಲಿ ಹತ್ಯಾಕಾಂಡ ಭುಗಿಲೆದ್ದಿತ್ತು. ಗಲಭೆಯಲ್ಲಿ 11 ಜನರನ್ನು ಹತ್ಯೆ ಮಾಡಲಾಗಿತ್ತು. ಘಟನೆ ನಡೆದು 21 ವರ್ಷಗಳ ಬಳಿಕ ಇಂದು ವಿಶೇಷ ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲಿದೆ. ಪ್ರಕರಣದಲ್ಲಿ 64 ಜನರ ಮೇಲೆ ಆರೋಪ ಹೊರಿಸಲಾಗಿದೆ.

28 ಫೆಬ್ರವರಿ 2002 ರಂದು ನರೋಡಾ ಗ್ರಾಮದಲ್ಲಿ ನಡೆದ ಹತ್ಯಾಕಾಂಡದಲ್ಲಿ 11 ಜನರನ್ನು ಸಜೀವ ದಹನ ಮಾಡಲಾಗಿತ್ತು. ಬಳಿಕ ಅವರ ಆಸ್ತಿಗಳನ್ನು ಲೂಟಿ ಮಾಡಿ ಸುಟ್ಟು ಹಾಕಲಾಗಿತ್ತು. ಸ್ಥಳದಲ್ಲಿದ್ದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ತನಿಖೆ ವೇಳೆ ಹಂತ ಹಂತವಾಗಿ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೂ ಸಲ್ಲಿಸಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ 2008 ರಲ್ಲಿ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ತನಿಖೆಯನ್ನು ಎಸ್​​ಐಟಿ ತಂಡಕ್ಕೆ ಹಸ್ತಾಂತರಿಸಲಾಗಿತ್ತು.

ಪ್ರಕರಣದಲ್ಲಿ ಒಟ್ಟು 258 ಸಾಕ್ಷಿಗಳಿದ್ದಾರೆ. ಇದರಲ್ಲಿ ನ್ಯಾಯಾಲಯವು 187 ಸಾಕ್ಷಿಗಳ ವಿಚಾರಣೆಯನ್ನು ಒಂದೇ ಬಾರಿಗೆ ಸಂಪೂರ್ಣವಾಗಿ ಪೂರ್ಣಗೊಳಿಸಿದೆ. ಈ ಪ್ರಕರಣದಲ್ಲಿ ಸರ್ಕಾರ, ಪ್ರಾಸಿಕ್ಯೂಷನ್, ಪ್ರತಿವಾದಿಗಳು 10 ಸಾವಿರ ಪುಟಗಳ ದೋಷಾರೋಪ ಮತ್ತು 100 ಹೇಳಿಕೆಗಳನ್ನು ಉಲ್ಲೇಖಿಸಿದೆ. ಒಟ್ಟು 86 ಆರೋಪಿಗಳನ್ನು ಪೊಲೀಸರು ಮತ್ತು ಎಸ್‌ಐಟಿ ಬಂಧಿಸಿದೆ. ಕೇಸ್​​ನಲ್ಲಿ ಒಬ್ಬ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ವಿಚಾರಣೆ ವೇಳೆ 17 ಆರೋಪಿಗಳು ಸಾವನ್ನಪ್ಪಿದ್ದರು. ಹೀಗಾಗಿ ಮೃತ ಆರೋಪಿಗಳ ಮೇಲಿನ ಪ್ರಕರಣಗಳನ್ನು ಕೈಬಿಡಲಾಗಿದೆ.

ಈ ಪ್ರಕರಣದಲ್ಲಿ 68 ಆರೋಪಿಗಳ ವಿರುದ್ಧ ಈಗಲೂ ಕೇಸ್​ ನಡೆಯುತ್ತಿದೆ. ಒಟ್ಟು 68 ಆರೋಪಿಗಳಿಗೆ ಇಂದು ಶಿಕ್ಷೆಯಾಗುವ ಸಾಧ್ಯತೆ ಇದೆ. ಮೂವರು ನ್ಯಾಯಾಧೀಶರ ನೇತೃತ್ವದಲ್ಲಿ ಎಲ್ಲಾ ವಾದಗಳು ಪೂರ್ಣಗೊಂಡಿವೆ. ಕಳೆದ 6 ವರ್ಷಗಳಿಂದ ವಾದ ಪ್ರತಿವಾದ ಆಲಿಸಲಾಗಿದೆ. ಟಿ.ಬಿ. ದೇಸಾಯಿ ಅವರು ಪ್ರಕರಣದಲ್ಲಿ ಕೊನೆಯ ವಾದ ಮಂಡಿಸಿದ್ದರು. ವಯಸ್ಸಿನ ಮಿತಿಯ ಕಾರಣ ನಿವೃತ್ತಿಯಾಗಿದ್ದಾರೆ. ವರ್ಗಾವಣೆಯ ನಂತರ ಅವರು ಎಸ್​ಐಟಿ ವಿಶೇಷ ನ್ಯಾಯಾಧೀಶರಾದ ಸುಭದ್ರಾ ಬಕ್ಷಿ ಅವರ ಮುಂದೆ ವಾದ ಮಂಡಿಸಿದರು.

ಒಂಬತ್ತು ಪ್ರಕರಣಗಳ ತನಿಖೆ:ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಗೋದ್ರಾ ಘಟನೆ ಸೇರಿದಂತೆ ಒಟ್ಟು 9 ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿತ್ತು. ಈ ಪೈಕಿ 8 ಪ್ರಕರಣಗಳನ್ನು ತಂಡ ಅಂತ್ಯಗೊಳಿಸಿದೆ. ನರೋಡಾ ಹತ್ಯಾಕಾಂಡ ಪ್ರಕರಣ 6 ವರ್ಷಗಳಿಂದ ತನಿಖೆ ನಡೆಸಲಾಗುತ್ತಿತ್ತು. ಇದೀಗ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ. ಹೀಗಾಗಿ ಪ್ರಕರಣದ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ರೈಲು ಸುಟ್ಟಿದ್ದ ಆರೋಪಿಗೆ ಜಾಮೀನು:2002ರ ಗೋಧ್ರಾ ಗಲಭೆಯಲ್ಲಿ ರೈಲು ಬೋಗಿಗೆ ಬೆಂಕಿ ಇಟ್ಟು ಸುಟ್ಟು ಹಾಕಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿ ಫಾರೂಕ್​ಗೆ ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಜಾಮೀನು ಮಂಜೂರು ಮಾಡಿದೆ. ಈತ ಕಳೆದ 17 ವರ್ಷಗಳಿಂದ ಜೈಲಿನಲ್ಲಿದ್ದಾನೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಜಾಮೀನು ನೀಡಿತ್ತು.

ಓದಿ:ಮಾನಹಾನಿ ಕೇಸ್​: ಶಿಕ್ಷೆ ತಡೆ ಕೋರಿದ ರಾಹುಲ್​​ ಗಾಂಧಿ ಮೇಲ್ಮನವಿ ಅರ್ಜಿ ತೀರ್ಪು ಇಂದು

ABOUT THE AUTHOR

...view details