ಬಾರಾಬಂಕಿ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 28 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಎಮ್ಮೆಯೊಂದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 83 ವರ್ಷದ ವ್ಯಕ್ತಿಯ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದೆ.
ಎಮ್ಮೆ ಸಾವಿಗೆ ಸಂಬಂಧಿಸಿದಂತೆ ಬರೇಲಿ ನ್ಯಾಯಾಲವು 83 ವರ್ಷದ ಅಚ್ಚನ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ಧನಿಗೆ ಹಲವು ವರ್ಷಗಳ ಹಿಂದೆ ಕೋರ್ಟ್ ಜಾಮೀನು ನೀಡಿತ್ತು. ಆದರೆ, ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ್ದ ಕಾರಣ ಅಧಿಕಾರಿಗಳು ಇತ್ತೀಚೆಗೆ ವಾರಂಟ್ ನೀಡಿದ್ದಾರೆ. ಅರೆಸ್ಟ್ ವಾರಂಟ್ ವಿಚಾರ ತಿಳಿದ ತಕ್ಷಣ ಪೊಲೀಸರ ಮುಂದೆ ವೃದ್ಧ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಈ ಘಟನೆಯು 1995 ರ ಹಿಂದಿನದು, ಮುನವ್ವರ್ ಅವರ ಮಗ ಅಚ್ಚನ್ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಾರಾಬಂಕಿ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ನಡೆದ ಪ್ರಸಂಗ. ಸದ್ಯಕ್ಕೆ ವೃದ್ಧ ಅಚ್ಚನ್, ಬಾರಾಬಂಕಿಯ ದಯಾನಂದ ಟೆಲಿಫೋನ್ ಎಕ್ಸ್ಚೇಂಜ್ ಹಿಂಭಾಗ ವಾಸಿಸುತ್ತಿದ್ದಾರೆ. ಇವರು ಈ ಹಿಂದೆ ಕೈಸರ್ಬಾಗ್ ಡಿಪೋದಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸಿದ್ದಾರೆ. ಚಾರ್ಬಾಗ್ ಮತ್ತು ಬಾರಾಬಂಕಿ ಡಿಪೋಗಳಲ್ಲಿ ಸಹ ಕೆಲಸ ಮಾಡಿದ್ದು, 1994ರಲ್ಲಿ ಕೈಸರ್ಬಾಗ್ನಿಂದ ಬರೇಲಿಗೆ ಹೋಗುತ್ತಿದ್ದಾಗ ಅಚ್ಚನ್ ಅವರೇ ಬಸ್ ಓಡಿಸುತ್ತಿದ್ದರು. ಈ ವೇಳೆ ದಾರಿಯಲ್ಲಿ ದಿಢೀರನೇ ಎಮ್ಮೆಯೊಂದು ಬಸ್ಸಿನ ಮುಂದೆ ಬಂದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸಾವನ್ನಪ್ಪಿತ್ತು.