ಕರ್ನಾಟಕ

karnataka

By

Published : Apr 24, 2022, 3:56 PM IST

ETV Bharat / bharat

ಪ್ರಧಾನಿ ಮೋದಿ ಭೇಟಿ ಮಾಡಿ ರುದ್ರಾಕ್ಷಿ ಮಾಲೆ ನೀಡಿದ ನಟ ಅನುಪಮ್​ ಖೇರ್​

'ದಿ ಕಾಶ್ಮೀರ್​ ಫೈಲ್ಸ್​' ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಅವರ ತಾಯಿ ನೀಡಿದ್ದ ರುದ್ರಾಕ್ಷಿ ಮಾಲೆಯನ್ನು ಉಡುಗೊರೆಯಾಗಿ ನೀಡಿದರು.

anupam-kher
ಅನುಪಮ್​ ಖೇರ್​

ನವದೆಹಲಿ:ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್​ ಫೈಲ್ಸ್'​ ಸಿನಿಮಾದಲ್ಲಿ ಕಾಶ್ಮೀರ ಪಂಡಿತರ ಪಾತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿರುವ ಹಿರಿಯ ನಟ ಅನುಪಮ್​ ಖೇರ್​ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರುದ್ರಾಕ್ಷಿ ಮಾಲೆ ನೀಡಿದರು.

ಈ ಕುರಿತ ಫೋಟೋಗಳನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿರುವ ಅನುಪಮ್​ ಖೇರ್, ಗೌರವಾನ್ವಿತ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು ಸಂತೋಷವಾಯಿತು. ದೇಶಕ್ಕಾಗಿ ನೀವು ಹಗಲಿರುಳು ಶ್ರಮಿಸುತ್ತಿರುವುದು ಎಲ್ಲರಿಗೂ ಸ್ಪೂರ್ತಿದಾಯಕ. ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ನೀವು ಸ್ವೀಕರಿಸಿದ್ದನ್ನು ನಾನು ಎಂದಿಗೂ ನೆನಪಿಟ್ಟುಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ತುಂಬಾ ಧನ್ಯವಾದಗಳು ಅನುಪಮ್ ಖೇರ್. ಮಾತಾಜಿ ಮತ್ತು ದೇಶದ ಜನರ ಆಶೀರ್ವಾದವೇ ನಾನು ರಾಷ್ಟ್ರಕ್ಕಾಗಿ ನಿರಂತರ ಸೇವೆ ಮಾಡಲು ಪ್ರೇರೇಪಿಸುತ್ತದೆ ಎಂದಿದ್ದಾರೆ.

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡಿದ್ದು, ಕಣಿವೆಯಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮದ ಬಗ್ಗೆ ಬೆಳಕು ಚೆಲ್ಲಿತ್ತು. ಇದು ರಾಜಕೀಯ ಪಡಸಾಲಯಲ್ಲಿ ಭಾರಿ ಪರ- ವಿರೋಧಕ್ಕೂ ಕಾರಣವಾಗಿತ್ತು. ವಿವೇಕ್​ ಅಗ್ನಿಹೋತ್ರಿ ಇದೀಗ ಡೆಲ್ಲಿ ಫೈಲ್ಸ್​ ಸಿನಿಮಾ ರೂಪಿಸುವ ಸಿದ್ಧತೆಯಲ್ಲಿದ್ದಾರೆ.

ಇದನ್ನೂ ಓದಿ:ಸಣ್ಣ ಆನ್‌ಲೈನ್ ಪಾವತಿಯಿಂದ ದೊಡ್ಡ ಡಿಜಿಟಲ್ ಆರ್ಥಿಕತೆ ಸೃಷ್ಟಿ: ಮೋದಿ

ABOUT THE AUTHOR

...view details