ಕರ್ನಾಟಕ

karnataka

ಲಂಚ ಪಡೆದ ಆರೋಪ: ಎಸಿಬಿಯಿಂದ ಐಪಿಎಸ್ ಅಧಿಕಾರಿ ಅರೆಸ್ಟ್​!

ಲಂಚ ಪಡೆದುಕೊಂಡಿರುವ ಆರೋಪದ ಮೇಲೆ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಐಪಿಎಸ್​ ಅಧಿಕಾರಿಯ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

By

Published : Feb 2, 2021, 9:41 PM IST

Published : Feb 2, 2021, 9:41 PM IST

Manish Agarwal
Manish Agarwal

ಜೈಪುರ್​:ಲಂಚ ಪಡೆದು ಆರೋಪದ ಮೇಲೆ ಐಪಿಎಸ್ ಅಧಿಕಾರಿಯ ಬಂಧನ ಮಾಡುವಲ್ಲಿ ಎಸಿಬಿ ಯಶಸ್ವಿಯಾಗಿದ್ದು, ಮನೀಷ್​ ಅಗರವಾಲ್ ಬಂಧಿತ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಧಿಕಾರಿಗಳ ಪರವಾಗಿ ಕಟ್ಟಡ ನಿರ್ಮಾಣ ಕಂಪನಿಯೊಂದರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಆರೋಪದ ಮೇಲೆ ಜ.13ರಂದು ಪೆಟ್ರೋಲ್ ಪಂಪ್ ಮಾಲೀಕ ನೀರಜ್ ಮೀನ ಎಂಬುವವರನ್ನ ಬಂಧನ ಮಾಡಲಾಗಿತ್ತು. ಈ ವೇಳೆ ವಿಚಾರಣ ನಡೆಸಿದಾಗ ಐಪಿಎಸ್ ಅಧಿಕಾರಿ ಕೈವಾಡ ಇರುವುದು ಬಹಿರಂಗಗೊಂಡಿತ್ತು.

2010ರ ಬ್ಯಾಚನ್ ಐಪಿಎಸ್ ಅಧಿಕಾರಿ ಮನೀಷ್ ಅಗರವಾಲ್​ ಅವರನ್ನ ಬಂಧನ ಮಾಡಲಾಗಿದ್ದು, ಇವರು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಕಮಾಂಡೆಂಟ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ABOUT THE AUTHOR

...view details