ಕರ್ನಾಟಕ

karnataka

ETV Bharat / bharat

'ಅಬ್​ ಕಿ ಬಾರ್ ಜಸೂಸ್ ಸರ್ಕಾರ್': ಪೆಗಾಸಸ್ ದಾಳಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಪೆಗಾಸಸ್ ಸಾಫ್ಟ್​ವೇರ್​ ಮೂಲಕ ಕೇಂದ್ರ ಸರ್ಕಾರ ಗೂಡಚರ್ಯೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಸಮಿತಿಯಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಯಿತು.

By

Published : Jul 20, 2021, 9:17 AM IST

http://10.10.50.85:6060//finalout4/karnataka-nle/thumbnail/20-July-2021/12512868_1016_12512868_1626751989374.png
ಪೆಗಾಸಸ್ ದಾಳಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್​ವೇರ್​ ಮೂಲಕ ಪ್ರತಿಪಕ್ಷದ ನಾಯಕರು, ಸಚಿವರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ಮತ್ತು ಪತ್ರಕರ್ತರ ಫೋನ್ ಟ್ಯಾಪಿಂಗ್ ಮಾಡಿರುವುದನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್​ ಸೋಮವಾರ ಪ್ರತಿಭಟನೆ ನಡೆಸಿತು. ನವದೆಹಲಿಯ ಶಾಸ್ತ್ರಿ ಭವನದ ಎದುರು ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಶ್ರೀನಿವಾಸ್ ಬಿ.ವಿ, ಬ್ರಿಟಿಷರ ಕಾಲದಲ್ಲಿ ವ್ಯವಹಾರಗಳ ಮೇಲೆ ಗೂಢಚರ್ಯೆ ನಡೆಸಲಾಗುತ್ತಿತ್ತು. ಅವರು ಹೋದರೂ ಆ ಪ್ರವೃತ್ತಿ ಈಗಲೂ ಮುಂದುವರೆದಿದೆ. ನಾವು ಯಾವಾಗ ಬದಲಾಗುವುದು? ಏಳು ವರ್ಷ ಕಳೆಯಿತು, ಆ, ವ್ಯಕ್ತಿ ( ಪ್ರಧಾನಿ ಮೋದಿ) ಮನ್​ ಕಿಬಾತ್​ ( ಮನದ ಮಾತು) ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓದಿ : ರಿ ಸೆಟ್ಟಿಂಗ್, ರಿ ಬೂಟಿಂಗ್ ಮೂಲಕ 'ಪೆಗಾಸಸ್' ಸ್ಪೈವೇರ್ ಅಳಿಸಿ ಹಾಕಲು ಸಾಧ್ಯವಿಲ್ಲ

ಪ್ರಧಾನಿ, ತಮ್ಮ ರಾಜಕೀಯ ವಿರೋಧಿಗಳು, ಪತ್ರಕರ್ತರು, ನ್ಯಾಯಾಧೀಶರು, ಕೈಗಾರಿಕೋದ್ಯಮಿಗಳು, ತಮ್ಮದೇ ಸಂಪುಟದ ಹಿರಿಯ ಮಂತ್ರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರು ಆರೆಸ್ಸೆಸ್​ ನಾಯಕರನ್ನೂ ಬಿಟ್ಟಿಲ್ಲ. ಇದು ಅಬ್​ ಕಿ ಬಾರ್ ಜಸೂಸ್ ಸರ್ಕಾರ್ ಎಂದರು.

ಮೋದಿ ಅವರು ಸಿಎಂ ಸ್ಥಾನದಿಂದ ಪಿಎಂ ಆಗಿ ಬದಲಾಗಿದ್ದಾರೆ. ಆದರೂ, ಅದೇ ಹಳೆ ಹವ್ಯಾಸಗಳನ್ನು ಮುಂದುವರೆಸಿದ್ದಾರೆ. ಬೇಹುಗಾರಿಕೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗುವವರೆಗೂ ಸುಮ್ಮನಿರುವುದಿಲ್ಲ. ಪ್ರಕರದ ತನಿಖೆಯ ಮೇಲ್ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತು ಜಂಟಿ ಸಂಸದೀಯ ಸಮಿತಿ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ABOUT THE AUTHOR

...view details