ಕರ್ನಾಟಕ

karnataka

ETV Bharat / bharat

ಅನಾರೋಗ್ಯ, ಅಧಿಕ ರಕ್ತದೊತ್ತಡ.. ಬೆಂಗಳೂರಿನಿಂದ ಕೊಚ್ಚಿಗೆ ತಲುಪಿದ ಕೂಡಲೇ ಮದನಿ ಆಸ್ಪತ್ರೆಗೆ ದಾಖಲು - ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ

ಕರ್ನಾಟಕದಿಂದ ನಿನ್ನೆ ಪ್ರಯಾಣ ಬೆಳೆಸಿದ್ದ ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಮದನಿ ಕೊಚ್ಚಿ ತಲುಪಿದ ಕೆಲವೇ ಗಂಟೆಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Abdul nazer mahdani  mahdani admitted to the hospital due to illness  Abdul nazer mahdani news  ಬೆಂಗಳೂರಿನಿಂದ ಕೊಚ್ಚಿಗೆ ತಲುಪಿದ ಕೂಡಲೇ ಮದನಿ  ಮದನಿ ಆಸ್ಪತ್ರೆಗೆ ದಾಖಲು  ಕರ್ನಾಟಕದಿಂದ ನಿನ್ನೆ ಪ್ರಯಾಣ  ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ  ಪೀಪಲ್ ಡೆಮಾಕ್ರಟಿಕ್ ಪಾರ್ಟಿ
ಬೆಂಗಳೂರಿನಿಂದ ಕೊಚ್ಚಿಗೆ ತಲುಪಿದ ಕೂಡಲೇ ಮದನಿ ಆಸ್ಪತ್ರೆಗೆ ದಾಖಲು

By

Published : Jun 27, 2023, 10:31 AM IST

ಎರ್ನಾಕುಲಂ, ಕೇರಳ:ಬೆಂಗಳೂರು ಸರಣಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಎನ್ನಲಾಗಿರುವ ಅಬ್ದುಲ್ ನಾಸಿರ್ ಮದನಿ ನಿನ್ನೆ ಸಂಜೆ ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದರು. ಕೊಚ್ಚಿಗೆ ಆಗಮಿಸಿದ ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮಾಜಿ ಅಧ್ಯಕ್ಷ ಅಬ್ದುಲ್ ನಾಜರ್ ಮದಾನಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಎರ್ನಾಕುಲಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ(ಜೂನ್ 26) ಕೊಚ್ಚಿಯಿಂದ ಕೊಲ್ಲಂಗೆ ಪ್ರಯಾಣಿಸುತ್ತಿದ್ದಾಗ ಅಧಿಕ ರಕ್ತದೊತ್ತಡದ ಕಾರಣ ಮದನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ನಂತರ ಅವರು ಕೊಲ್ಲಂಗೆ ಮರಳಲಿದ್ದಾರೆ.

ಮದನಿ ನಿನ್ನೆ ಬೆಂಗಳೂರಿನಿಂದ ಕೇರಳಕ್ಕೆ ಆಗಮಿಸಿದ್ದರು. ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಅವರನ್ನು ಪಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಬರಮಾಡಿಕೊಂಡರು. ಬೆಂಗಳೂರಿನಿಂದ ವಿಮಾನದ ಮೂಲಕ ಕೊಚ್ಚಿ ತಲುಪಿದ ಮದನಿ ಅವರು ಆಂಬ್ಯುಲೆನ್ಸ್‌ನ ಮೂಲಕ ಕೊಲ್ಲಂಗೆ ಮರಳಲು ಯೋಜಿಸಿದ್ದರು. ಅವರು ಕೆಲ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಪ್ರಯಾಣದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಮದನಿಗೆ ತನ್ನ ತಂದೆಯನ್ನು ಭೇಟಿ ಮಾಡುವ ಆಸೆ ಇದೆ. ತಂದೆಯೊಂದಿಗೆ ಕಾಲ ಕಳೆದು ಅನ್ವರ್ಸೇರಿಗೆ ತೆರಳಲಿದ್ದಾರೆ. ಐದೂವರೆ ವರ್ಷಗಳ ನಂತರ ಚಿಕಿತ್ಸೆ ಪಡೆಯುತ್ತಿದ್ದ ತಂದೆಯನ್ನು ನೋಡಲು ಕೇರಳಕ್ಕೆ ಬಂದಿದ್ದಾರೆ. ಇದಕ್ಕೂ ಮೊದಲು ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಬಂದಿದ್ದರು. ಚಿಕಿತ್ಸೆ ಪಡೆಯುತ್ತಿರುವ ತನ್ನ ತಂದೆಯನ್ನು ನೋಡಲು ಕೇರಳಕ್ಕೆ ಭೇಟಿ ನೀಡಲು ಮದನಿಗೆ ಈ ಹಿಂದೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆದು ಮದನಿ 12 ಕಾಲ ಕೇರಳದಲ್ಲಿ ವಾಸ್ತವ್ಯ ಹೂಡಲಿದ್ದು, ಜುಲೈ 7ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾನೆ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಲು ಅನುಮತಿ ಕೋರಿ ಸುಪ್ರೀಂಕೋರ್ಟ್​ಗೆ ಮದನಿ ಅರ್ಜಿ ಸಲ್ಲಿಸಿದ್ದ. ಈ ಸಂಬಂಧ ಮದನಿ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯವು ಕೇರಳಕ್ಕೆ ತೆರಳಲು ಅನುಮತಿ ನೀಡಿತ್ತು. ಹೀಗಾಗಿ ಒಬ್ಬ ಆರ್​ಎಸ್ಐ, ಮೂವರು ಕಾನ್ಸ್​​ಟೇಬಲ್​ಗಳು ಹಾಗೂ ಒಬ್ಬ ಚಾಲಕನನ್ನು ನಿಯೋಜಿಸಲಾಗಿದೆ. 12 ದಿನಗಳ ಸಿಬ್ಬಂದಿ ಖರ್ಚು-ವೆಚ್ಚ ಹಾಗೂ ಸೇವಾ ಶುಲ್ಕ 6,76,101 ರೂಪಾಯಿಯನ್ನು ಕರ್ನಾಟಕಕ್ಕೆ ಸರ್ಕಾರಕ್ಕೆ ಮುಂಗಡವಾಗಿ ಪಾವತಿಸಿದ್ದಾನೆ ಎಂದು ಹೇಳಲಾಗಿದೆ.

2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಜಾಮೀನಿನ ಮೇರೆಗೆ ಮದನಿ ಹೊರಗಿದ್ದಾನೆ. ಮದನಿ ಜಾಮೀನಿನ ಷರತ್ತು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾನೆ. ತಂದೆಯ ಅನಾರೋಗ್ಯ ಹಿನ್ನೆಲೆ ಕರ್ನಾಟಕ ಪೊಲೀಸರು ವಿಧಿಸಿರುವ ಭದ್ರತಾ ರಕ್ಷಣೆ ಹಣ ಕಡಿಮೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದ. ಆದರೆ ಕೋರ್ಟ್‌ ಅರ್ಜಿ ನಿರಾಕರಿಸಿತ್ತು.

ಈಗ ಕರ್ನಾಟಕದ ಹೊಸ ಕಾಂಗ್ರೆಸ್ ಸರ್ಕಾರವು ಸೆಕ್ಯುರಿಟಿ ವಿಷಯಗಳಲ್ಲಿ ರಿಯಾಯಿತಿಗಳನ್ನು ನೀಡಿದೆ. ಭದ್ರತೆ ಒದಗಿಸುವ ಪೊಲೀಸ್ ಅಧಿಕಾರಿಗಳ ಸಂಖ್ಯೆಯನ್ನು 12ಕ್ಕೆ ಇಳಿಸಿದೆ. ಇದೇ ವೇಳೆ ಮದನಿ ವಾಸಿಸುವ ಕೊಲ್ಲಂ ಅನ್ವರ್ಸೇರಿ ಅನಾಥಾಶ್ರಮಕ್ಕೆ ಕೇರಳ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದಾರೆ. ಪ್ರವಾಸಿಗರ ಮೇಲೂ ನಿರ್ಬಂಧ ಹೇರಲಾಗಿದೆ. ಬಿಗಿ ಭದ್ರತೆ ಮಧ್ಯೆ ಕೇರಳದಲ್ಲಿ 12 ದಿನಗಳ ಕಾಲ ಕಳೆದ ನಂತರ ಮಹದಾನಿ ಬೆಂಗಳೂರಿಗೆ ಮರಳಲಿದ್ದಾರೆ.

ಓದಿ:ಪೊಲೀಸ್ ಭದ್ರತೆಯೊಂದಿಗೆ ಕೇರಳಕ್ಕೆ ತೆರಳಿದ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಮದನಿ

2008 ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮದನಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇವರೊಂದಿಗೆ ಇತರ 31 ಮಂದಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಬ್ಬರು ಮೃತಪಟ್ಟು 20 ಮಂದಿ ಗಾಯಗೊಂಡಿದ್ದರು.

ABOUT THE AUTHOR

...view details