ಕರ್ನಾಟಕ

karnataka

ETV Bharat / bharat

ಹೆತ್ತ ಮಗು ಮಾರಾಟ ಆರೋಪ: ತಾಯಿ ಸೇರಿ ನಾಲ್ವರ ಬಂಧನ - ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದು

ನವಜಾತ ಶಿಶು ಮಾರಾಟ ಮಾಡಿದ ಆರೋಪದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನವಜಾತ ತಾಯಿಯೂ ಸೇರಿದ್ದಾರೆ. ಈ ಘಟನೆ ಪಶ್ಚಿಮಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ.

widow and three others were arrested  trying to sell her own baby in West Bengal  trying to sell her own baby  ಹೆತ್ತ ಮಗು ಮಾರಾಟ ಆರೋಪ  ತಾಯಿ ಸೇರಿ ನಾಲ್ವರ ಬಂಧನ  ನವಜಾತ ಶಿಶುವನ್ನು ಮಾರಾಟ ಮಾಡಿದ ಆರೋಪ  ಬಂಧಿತರಲ್ಲಿ ನವಜಾತ ತಾಯಿ  ನವಜಾತ ಶಿಶುವನ್ನು ಮಾರಾಟ  ಭೂಮಿ ಮಾರಾಟ ಮಾಡಿ ಹಣ ಹೊಂದಿಸಿದ ಮಹಿಳೆ  ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದು  ಆರೋಪ ನಿರಾಕರಿಸಿದ ಆರೋಪಿಗಳು
ಹೆತ್ತ ಮಗು ಮಾರಾಟ ಆರೋಪ

By

Published : Jul 27, 2023, 7:43 PM IST

ದಕ್ಷಿಣ 24 ಪರಗಣ, ಪಶ್ಚಿಮಬಂಗಾಳ:ನವಜಾತ ಶಿಶುವನ್ನು ಎರಡು ಲಕ್ಷಕ್ಕೆ ಮಾರಾಟ ಮಾಡಿರುವ ಘಟನೆ ಜಿಲ್ಲೆಯ ನರೇಂದ್ರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಪೊಲೀಸರು ಮಹಿಳೆಯೊಬ್ಬರಿಗೆ ಶಿಶು ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹಣಕಾಸಿನ ವ್ಯವಹಾರವನ್ನು ಒಪ್ಪಿಕೊಂಡಿದ್ದಾರೆ. ಆದರೆ ನವಜಾತ ಶಿಶುಗಳ ಮಾರಾಟವನ್ನು ನಿರಾಕರಿಸಿದ್ದಾರೆ.

ನವಜಾತ ಶಿಶುವನ್ನು ಮಾರಾಟ: ಪ್ರಾಥಮಿಕ ತನಿಖೆಯ ನಂತರ ಮಹಿಳೆಯ ಪತಿ ಬಹಳ ಹಿಂದೆಯೇ ಮೃತಪಟ್ಟಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಇದಾದ ಬಳಿಕ ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಆ ಸಂಬಂಧದಿಂದಾಗಿ ಆಕೆ ಗರ್ಭಿಣಿಯಾದಳು. ಘಟನೆ ತಿಳಿದ ನೆರೆಹೊರೆಯವರು ಆಕೆಯ ಬಗ್ಗೆ ಗುಸುಗುಸು ಮಾತನಾಡಲು ಪ್ರಾರಂಭಿಸಿದರು. ಆಗ ವಿಧವೆಗೆ ಹುಟ್ಟಲಿರುವ ಮಗುವನ್ನು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದರು.

ಭೂಮಿ ಮಾರಾಟ ಮಾಡಿ ಹಣ ಹೊಂದಿಸಿದ ಮಹಿಳೆ:ಈ ವಿಷಯ ತಪಸ್ ಮೊಂಡಲ್ ಮತ್ತು ಶಾಂತಿ ಮೊಂಡಲ್ ಎಂಬ ದಂಪತಿಗೆ ತಿಳಿಯಿತು. ಆಗ ಶಾಂತಿ ಅವರು ಪಂಚಸಾಯರ್ ಪ್ರದೇಶದ ನಿವಾಸಿ ಜುಮಾ ಮಾಝಿಗೆ ಕರೆ ಮಾಡಿದ್ದಾರೆ. ಜುಮಾಗೆ ಮಕ್ಕಳಿಲ್ಲ. ಹೀಗಾಗಿ ಶಾಂತಿ ಅವರು ಜುಮಾಗೆ ಮಗುವನ್ನು ದತ್ತು ಪಡೆಯಲು ಒಪ್ಪಿಸಿದ್ದಳು. ಪ್ರಕ್ರಿಯೆ ಮುಂದುವರೆಯಿತು. ಜುಮಾ ಮಗುವನ್ನು 2 ಲಕ್ಷ ರೂಪಾಯಿಗೆ ಖರೀದಿಸಿ 11 ದಿನದ ಹಸುಳೆಯನ್ನು ಮನೆಗೆ ಕರೆತಂದಿದ್ದಾರೆ. ಆ ಹಣವನ್ನು ಹೊಂದಿಸಲು ಜುಮಾ ತನ್ನ ಭೂಮಿಯನ್ನು ಸಹ ಮಾರಾಟ ಮಾಡಿದ್ದರು.

ಪೊಲೀಸ್​ ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದು ಹೀಗೆ..: ಈ ಸುದ್ದಿ ಆ ಪ್ರದೇಶದಲ್ಲಿ ಹರಿದಾಡುತ್ತಿತ್ತು. ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಚಾರಣೆಯ ಸಮಯದಲ್ಲಿ ಎಲ್ಲರೂ ಘಟನೆಯನ್ನು ನಿರಾಕರಿಸಿದರು. ತಾಯಿಯ ಪ್ರಕಾರ, ಅವಳು ತನ್ನ ಮಗುವನ್ನು ಮಾರಲಿಲ್ಲ. ಅವಳು ತನ್ನ ಮಗುವನ್ನು ಅದರ ಭವಿಷ್ಯಕ್ಕಾಗಿ ಕೊಟ್ಟಿದ್ದೇನೆ ಎಂದು ಹೇಳಿದರು. ಜುಮಾ ಅದನ್ನೇ ಪುನರಾವರ್ತಿಸುತ್ತಿದ್ದರು. "ನಾನು ಮಗುವನ್ನು ಖರೀದಿಸಿಲ್ಲ. ಮಗುವಿನ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಾನು ಮಗುವನ್ನು ತೆಗೆದುಕೊಂಡೆ. ಮತ್ತೊಂದೆಡೆ, ಈ ಮಹಿಳೆ (ಮಗುವಿನ ತಾಯಿ) ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕಾಗಿ ನಾನು ಅವಳಿಗೆ 2 ಲಕ್ಷ ನೀಡಿದ್ದೇನೆ. ಮಗುವಿಗೆ ಅಲ್ಲ ಎಂದು ಜುಮಾ ಪೊಲೀಸರ ವಿಚಾರಣೆ ವೇಳೆ ಹೇಳಿದ್ದರು.

ಆರೋಪ ನಿರಾಕರಿಸಿದ ಆರೋಪಿಗಳು:ಈ ಪ್ರಕ್ರಿಯೆಯನ್ನು ಮಧ್ಯಸ್ಥಿಕೆ ವಹಿಸುವ ದಂಪತಿಗಳು ನಾವು ಯಾವುದೇ ಹಣವನ್ನು ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾವು ಜುಮಾಗೆ ಸಹಾಯ ಮಾಡಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು. ಇದರ ಹಿಂದೆ ಮಕ್ಕಳ ಕಳ್ಳಸಾಗಾಣಿಕೆ ತಂಡವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಪೊಲೀಸರು ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ಓದಿ:ತುಮಕೂರು: ಊರ ಹೊರಗಿನ ಗುಡಿಸಲಿನಲ್ಲಿ ಇರಿಸಲಾಗಿದ್ದ ಮಗು ಸಾವು; ಮೂಢನಂಬಿಕೆಗೆ ಕಂದಮ್ಮ ಬಲಿ!

ABOUT THE AUTHOR

...view details