ಮಹಾರಾಷ್ಟ್ರ: ಕೊರೊನಾ ಬಿಕ್ಕಟ್ಟಿನ ಸಮಯವನ್ನು ಅವಕಾಶವಾಗಿ ಬಳಸಿಕೊಂಡಿರುವ ಯುವ ಉದ್ಯಮಿಯೋರ್ವ, ಆಯುರ್ವೇದ ಔಷಧದಲ್ಲಿ ವ್ಯಾಪಕವಾಗಿ ಬಳಸುವ ಅಮೃತಬಳ್ಳಿಯನ್ನು ಕಂಪನಿಗಳಿಗೆ ಪೂರೈಸುವ ಮೂಲಕ ಕೋಟಿಗಟ್ಟಲೇ ಹಣ ಗಳಿಸುತ್ತಿದ್ದಾನೆ. ಇದೆಲ್ಲಾ ಮಾಡುತ್ತಿರುವುದು ಓರ್ವ ಬುಡಕಟ್ಟು ಯುವಕನಾಗಿದ್ದು, ತನ್ನ ಹಲವು ಗಿರಿಜನರಿಗೆ ಈ ಮೂಲಕ ಉದ್ಯೋಗ ಕಲ್ಪಿಸಿದ್ದಾನೆ.
ಕೊರೊನಾದಿಂದ ಅನೇಕ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದರೆ, ಮಹಾರಾಷ್ಟ್ರದ ಥಾಣೆ ಮೂಲದ ಸುನಿಲ್ ಪವಾರ್ ಎಂಬ ಯುವ ಬುಡಕಟ್ಟು ಉದ್ಯಮಿ, ಅಮೃತಬಳ್ಳಿ ಪೂರೈಕೆ ಮಾಡುವುದಾಗಿ ಪ್ರಮುಖ ಕಂಪನಿಗಳೊಂದಿಗೆ 1.5 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದ್ದಾನೆ. ಈ ಮೂಲಕ ನೂರಾರು ಮಂದಿಗೆ ಉದ್ಯೋಗವಕಾಶ ಕಲ್ಪಿಸಿದ್ದಾನೆ.
ಸುನೀಲ್ ಶಹಪುರ್ ತಾಲೂಕಿನ ಖಾರಿದ್ ಮೂಲದವನು. ಸ್ಥಳೀಯ ಕಾಡುಗಳಲ್ಲಿ ಕಂಡು ಬರುವ ಔಷಧೀಯ ಸಸ್ಯಗಳ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದಾನೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಮೃತಬಳ್ಳಿ (ಗಿಲ್ಲೊಯ್) ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.