ವನಪರ್ತಿ:ಹೆತ್ತ ಮಗನನ್ನೇ ತಾಯಿಯೊಬ್ಬಳು ಬರ್ಬರವಾಗಿ ಕೊಲೆ ಮಾಡಿ ಮರಳಿನಲ್ಲಿ ಹೂತಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೊತ್ತಕೋಟೆ ತಾಲೂಕಿನ ರಾಮಕೃಷ್ಣಪುರಂ ನಿವಾಸಿ ನಾಗಮ್ಮ ತನ್ನ ತಾಯಿ ಬುಚ್ಚಮ್ಮ ಮತ್ತು ಮಗ ಶಿವ ಜೊತೆ ವಾಸಿಸುತ್ತಿದ್ದರು. ನಾಗಮ್ಮ ತನ್ನ ಮಗ ಶಿವನನ್ನು ತಾಯಿ ಬುಚ್ಚಮ್ಮನ ಸಹಾಯದಿಂದ ಚಾಕುವಿನಿಂದ ದಾಳಿ ಮಾಡಿ ಕತ್ತು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬಳಿಕ ಮಗನ ಶವವನ್ನು ಮನೆಯ ಪಕ್ಕದಲ್ಲಿರುವ ಮರಳಿನಲ್ಲಿ ಹೂತಾಕಿದ್ದಾರೆ.