ಕರ್ನಾಟಕ

karnataka

By

Published : Nov 9, 2022, 5:04 PM IST

ETV Bharat / bharat

ಪಿಸ್ತೂಲ್​​ ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ ಮಾಜಿ ಸೈನಿಕ

ಹೈದರಾಬಾದ್​ನ ಅಮೀರ್‌ಪೇಟ್‌ನಲ್ಲಿ ಮಾಜಿ ಸೈನಿಕರೊಬ್ಬರು ಹಾಡಹಗಲೇ ಪಿಸ್ತೂಲ್​​ ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ.

a-man-terrorized-people-with-a-pistol-in-ameerpet-hyderabad
ಪಿಸ್ತೂಲ್​​ ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ ಮಾಜಿ ಸೈನಿಕ

ಹೈದರಾಬಾದ್‌ (ತೆಲಂಗಾಣ): ಜನ ಸಂದಣಿ ಪ್ರದೇಶದಲ್ಲಿ ಪಿಸ್ತೂಲ್​​ ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ್ದ ಆರೋಪದ ಮೇಲೆ ಮಾಜಿ ಸೈನಿಕರೊಬ್ಬರನ್ನು ಹೈದರಾಬಾದ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಿಸ್ತೂಲ್​ ತೋರಿಸಿ ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂದು ಹೇಳಲಾಗಿದೆ .

ಇಲ್ಲಿನ ಅಮೀರ್‌ಪೇಟ್‌ನ ಬಿಗ್‌ಬಜಾರ್‌ ಸಮೀಪ ಮಾಜಿ ಸೈನಿಕ ಸಾಯಿಕುಮಾರ್ ಎಂಬಾತ ಕೈಯಲ್ಲಿ ಪಿಸ್ತೂಲ್​ ಹಿಡಿದು ಸುತ್ತಾಡಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ವಿಷಯ ತಿಳಿದ ಪಂಜಗುಟ್ಟ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಅಲ್ಲದೇ, ಆರೋಪಿ ಸಾಯಿಕುಮಾರ್​ ಬಳಿಯಿದ್ದ ಪಿಸ್ತೂಲ್​​ ಮತ್ತು ಆರು ಜೀವಂತ ಗುಂಡು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ಹರಿಶ್ಚಂದ್ರರೆಡ್ಡಿ ತಿಳಿಸಿದ್ದಾರೆ. ಇದೇ ವೇಳೆ, ಮಾದಾಪುರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೆಪಿಎಚ್​ಬಿ - ಹೈಟೆಕ್ ಸಿಟಿ ರಸ್ತೆಯಲ್ಲಿ 2 ಕಿ.ಮೀ.ವಾಹನಗಳು ನಿಂತಿದ್ದವು. ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಪರದಾಡಿದರು.

ಇದನ್ನೂ ಓದಿ:ಪ್ರೀತಿಸಿದ್ದ ಯುವತಿಗೆ ಮದುವೆ ನಿಶ್ಚಯ: ಫೇಸ್​ಬುಕ್​ ಲೈವ್​ನಲ್ಲಿ ಕಟ್ಟರ್ ಯಂತ್ರದಿಂದ ಕತ್ತು ಕೊಯ್ದುಕೊಂಡ ಪ್ರಿಯಕರ

ABOUT THE AUTHOR

...view details