ಕರ್ನಾಟಕ

karnataka

ಭಾರತ್​ ಜೋಡೋ ಯಾತ್ರೆ: ಮೋದಿ, ಶಾ ದೇಶದ ಸಮಸ್ಯೆ ಬಗ್ಗೆ ಮಾತನಾಡುವಂತೆ ಮಾಡಿದೆ : ಕಾಂಗ್ರೆಸ್​ ನಾಯಕ ಪವನ್​ ಖೇರಾ

By ETV Bharat Karnataka Team

Published : Sep 16, 2023, 1:58 PM IST

ತೆಲಂಗಾಣದ ಹೈದರಾಬಾದ್​ನಲ್ಲಿ ಎರಡು ದಿನಗಳ ಕಾಲ ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ಸಭೆ ನಡೆಯುತ್ತಿದೆ.

a-lot-of-you-had-a-complaint-with-the-congress-party-pawan-khera
Etv ಭಾರತ್​ ಜೋಡೋ ಯಾತ್ರೆ ಮೋದಿ, ಅಮಿತ್​ ಶಾ ದೇಶದ ಸಮಸ್ಯೆ ಬಗ್ಗೆ ಮಾತನಾಡುವಂತೆ ಮಾಡಿದೆ : ಕಾಂಗ್ರೆಸ್​ ನಾಯಕ ಪವನ್​ ಖೇರಾ

ಹೈದರಾಬಾದ್ (ತೆಲಂಗಾಣ): ಹೈದರಾಬಾದ್​ನಲ್ಲಿ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಪ್ರಾರಂಭವಾಗಿದ್ದು, ಸಭೆಯಲ್ಲಿ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ, ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ.

ಸಭೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಕಾಂಗ್ರೆಸ್​ ನಾಯಕ ಪವನ್​ ಖೇರಾ, ಇಂಡಿಯಾ ಒಕ್ಕೂಟವು ಹಲವು ಸುದ್ಧಿ ಮಾಧ್ಯಮದ ನಿರೂಪಕರನ್ನು ಬಹಿಷ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ ಅಥವಾ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ಹೇಳಿದರು.

ಇದು ನಮ್ಮ ಅಸಹಕಾರ ಚಳವಳಿಯಾಗಿದೆ. ನಾವು ಸಮಾಜದಲ್ಲಿ ದ್ವೇಷವನ್ನು ಹರಡುವವರಿಗೆ ಸಹಕರಿಸುವುದಿಲ್ಲ. ಅಲ್ಲದೇ ನಾವು ಅವರನ್ನು ದ್ವೇಷ ಹರಡುವುದರಿಂದ ತಡೆಯುತ್ತಿಲ್ಲ. ನೀವು ಸಮಾಜದಲ್ಲಿ ದ್ವೇಷ ಹರಡಬೇಕೆಂದಿಂದರೆ ಆ ರೀತಿ ಮಾಡಿ. ನಿಮಗೆ ಹಾಗೆ ಮಾಡಲು ಸ್ವಾತಂತ್ರ್ಯ ಇದೆ. ಇದರಲ್ಲಿ ಭಾಗಿಯಾಗದಿರಲು ನಮಗೂ ಸ್ವಾತಂತ್ರ್ಯ ಇದೆ ಎಂದರು.

ಅವರು ನಮ್ಮ ಶತ್ರುಗಳಲ್ಲ, ನಾವು ಅವರನ್ನು ದ್ವೇಷ ಮಾಡುವುದಿಲ್ಲ. ನಾಳೆ ಅವರು ಮಾಡುತ್ತಿರುವುದು ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅವರು ಅರಿತುಕೊಂಡರೆ, ನಾವು ಮತ್ತೆ ಅವರ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ. ಇದನ್ನು ಬ್ಯಾನ್​ ಎಂದು ಕರೆಯಬೇಡಿ ಎಂದು ಹೇಳಿದರು.

ಕಾಂಗ್ರೆಸ್​​ಗೆ ಭಾರತ ಜೋಡೋದಿಂದ ಮಹತ್ತರ ತಿರುವು:ನಿಮ್ಮಲ್ಲಿ ಸಾಕಷ್ಟು ಜನರು ಕಾಂಗ್ರೆಸ್ ಪಕ್ಷದ ವಿರುದ್ಧ ದೂರು ಹೊಂದಿದ್ದರು. ಇಂದು ನಾವು ದೇಶದ ಬೀದಿಗಳಲ್ಲಿ ಇಲ್ಲ. ಈಗ ಆ ದೂರು ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರು 4,000 ಕಿ.ಮೀ 'ಭಾರತ್ ಜೋಡೋ ಯಾತ್ರೆ' ಮಾಡಿದರು. ಇದು ನಮ್ಮ ರಾಜಕೀಯದಲ್ಲಿ ಮಹತ್ವದ ತಿರುವು ನೀಡಿದೆ.

ಇಂದಿಗೂ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಇಂದು ಭಾರತ ಜೋಡೋ ಯಾತ್ರೆ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೇಶವು ಎದುರಿಸುತ್ತಿರುವ ನಿಜವಾದ ಸಮಸ್ಯೆಗಳ ಮೇಲೆ ಚರ್ಚೆ ಮಾಡುವಂತೆ ಮಾಡಿದೆ. ಕಳೆದ ಒಂಬತ್ತು ವರ್ಷಗಳಿಂದ ಅವರು ನಮ್ಮ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್​ ದೇಶ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಮಾಡಿದೆ ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆ ಮತ್ತು ಪಂಚ ರಾಜ್ಯಗಳ ಚುನಾವಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ :ಹೈದರಾಬಾದ್​ನಲ್ಲಿ ಸಿಡಬ್ಲ್ಯೂಸಿ ಸಭೆ: 'ಐದು ರಾಜ್ಯಗಳ ಮುಂಬರುವ ಚುನಾವಣೆಗಳ ಬಗ್ಗೆ ಚರ್ಚೆ'; ಮಲ್ಲಿಕಾರ್ಜುನ ಖರ್ಗೆ

ABOUT THE AUTHOR

...view details