ಕರ್ನಾಟಕ

karnataka

ETV Bharat / bharat

ಕಾರು ಕಾಲುವೆಗೆ ಬಿದ್ದು ಸರ್ಕಾರಿ ಸಚೇತಕರ ಕುಟುಂಬಸ್ಥರಿಬ್ಬರ ದುರ್ಮರಣ

ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ವೇಳೆ, ಕಾರು ಚಲಾಯಿಸುತ್ತಿದ್ದ ಮದನ್​ ಮೋಹನ್​ ಅವರು ಹೇಗೋ ಈಜಿಕೊಂಡು ಪಾರಾಗಿದ್ದಾರೆ. ಆದರೆ, ಅವರೊಂದಿಗಿದ್ದ ಪತ್ನಿ ಲಾವಣ್ಯ ಹಾಗೂ ಪುತ್ರಿ ಸುದೀಕ್ಷಾ ನೀರು ಪಾಲಾಗಿದ್ದಾರೆ.

By

Published : Jan 12, 2022, 1:48 PM IST

car
ಕಾರು

ಗುಂಟೂರು(ಆಂಧ್ರಪ್ರದೇಶ):ಬೈಕ್​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರೊಂದು ಕಾಲುವೆಗೆ ಬಿದ್ದು ಇಬ್ಬರು ನೀರು ಪಾಲಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಆಡಿಗೊಪ್ಪಳ ಬಳಿ ನಿನ್ನೆ ರಾತ್ರಿ ನಡೆದಿದೆ. ಘಟನೆಯಲ್ಲಿ ನಾಪತ್ತೆಯಾದವರು ಆಂಧ್ರಪ್ರದೇಶದ ಸರ್ಕಾರಿ ಸಚೇತಕ ಪಿನ್ನೆಳ್ಳಿ ಅವರ ಸೋದರ ಸಂಬಂಧಿಯಾದ ಮದನ್​ ಮೋಹನ್​ ಅವರ ಕುಟುಂಬಸ್ಥರಾಗಿದ್ದಾರೆ.

ಮದನ್​ ಮೋಹನ್​ ಅವರ ಕುಟುಂಬಸ್ಥರು ವಿಜಯವಾಡಕ್ಕೆ ತೆರಳುತ್ತಿದ್ದರು. ಈ ವೇಳೆ, ಗುಂಟೂರಿನ ಅಡಿಗೊಪ್ಪಳ ಬಳಿ ಇರುವ ಸಾಗರ್ ಬಲದಂಡೆ ಕಾಲುವೆಯ ಮೇಲೆ ಕಾರು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್​ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಆಯತಪ್ಪಿ ಕಾಲುವೆಗೆ ಬಿದ್ದಿದೆ.

ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ಕಾರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ವೇಳೆ, ಕಾರು ಚಲಾಯಿಸುತ್ತಿದ್ದ ಮದನ್​ ಮೋಹನ್​ ಅವರು ಹೇಗೋ ಈಜಿಕೊಂಡು ಪಾರಾಗಿದ್ದಾರೆ. ಆದರೆ, ಅವರೊಂದಿಗಿದ್ದ ಪತ್ನಿ ಲಾವಣ್ಯ ಹಾಗೂ ಪುತ್ರಿ ಸುದೀಕ್ಷಾ ನೀರು ಪಾಲಾಗಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಾತ್ರಿ 11 ಗಂಟೆಯವರೆಗೂ ಹುಡುಕಾಟ ನಡೆಸಿದರೂ ಕಾರು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಸರ್ಕಾರಿ ಸಚೇತಕ ಪಿನ್ನೆಳ್ಳಿ ರಾಮಕೃಷ್ಣಾರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮೃತದೇಹ ನೋಡಿ ಹೃದಯಾಘಾತದಿಂದ ತಂಗಿಯೂ ಸಾವು

For All Latest Updates

TAGGED:

ABOUT THE AUTHOR

...view details