ಮಾನಸ(ಪಂಜಾಬ್) :ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ನಿಧನದಿಂದ, ಸಿಧು ಅವರ ಅಭಿಮಾನಿಗಳು ನಿರಂತರವಾಗಿ ಅವರ ಗ್ರಾಮಕ್ಕೆ ಆಗಮಿಸಿ ಸಿಧುಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಈ ನಡುವೆ ವಿವಿಧ ರೀತಿಯಲ್ಲಿ ಕಲಾಕೃತಿಗಳನ್ನು ಸಿದ್ಧಪಡಿಸಿ ಬಾಲಕ ಪ್ರಸ್ತುತಪಡಿಸಿದ್ದಾನೆ.
ಬಟಿಂಡಾದ ರಾಂಪುರ ಫೂಲ್ನ ಆದಂಪುರ ಗ್ರಾಮದ ನಿವಾಸಿ 12 ವರ್ಷದ ಮಣಿಂದರ್ ಸಿಂಗ್ ಎಂಬ ಬಾಲಕ ಈ ವಿಶಿಷ್ಟ ಮಹಲ್ ತಯಾರಿಸಿರುವ ಬಾಲಕ. ಮಣಿಂದರ್ ಕಾರ್ಡ್ಬೋರ್ಡ್ನಿಂದ ಸಿಧು ಅವರ ಮಹಲ್ ಮಾದರಿ ನಿರ್ಮಾಣ ಮಾಡಿದ್ದಾನೆ. ಅಷ್ಟೇ ಅಲ್ಲ, ವಾಹನಗಳು ಸೇರಿದಂತೆ ಅವರನ್ನು ಸ್ಮರಿಸುವ ವಸ್ತುಗಳನ್ನು ರಟ್ಟಿನಿಂದ ಹಾಗೂ ಕಾರ್ಡ್ಬೋರ್ಟ್ನಿಂದ ತಯಾರಿಸಿದ್ದಾನೆ.