ಹೈದರಾಬಾದ್(ತೆಲಂಗಾಣ): ಜೂನ್ 30 ರಂದು ಇಲ್ಲಿನ ಗೋಲ್ಕೊಂಡದಲ್ಲಿ ನಡೆಯಲಿರುವ ಬೋನಾಲು ಹಬ್ಬದ ಭದ್ರತಾ ವ್ಯವಸ್ಥೆಯನ್ನು 800 ಮಂದಿ ಪೊಲೀಸರು ನೋಡಿಕೊಳ್ಳಲಿದ್ದಾರೆ ಎಂದು ತೆಲಂಗಾಣ ಪಶುಸಂಗೋಪನಾ ಸಚಿವ ಟಿ. ಶ್ರೀನಿವಾಸ್ ಯಾದವ್ ತಿಳಿಸಿದರು. ಈ ಬಗ್ಗೆ ಯಾದವ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಉತ್ಸವದ ಕುರಿತು ಪರಿಶೀಲನಾ ಸಭೆ ನಡೆಸಿದರು.
ಬೋನಾಲು ಮಹಾಂಕಾಳಿ ದೇವಿಯನ್ನು ಪೂಜಿಸುವ ಹಿಂದೂ ಹಬ್ಬವಾಗಿದೆ. ತೆಲಂಗಾಣದಲ್ಲಿ ವಿಶಿಷ್ಟವಾದ ಬೋನಾಲು ಮತ್ತು ಬತುಕಮ್ಮ ಹಬ್ಬಗಳು ಕೆ.ಚಂದ್ರಶೇಖರ ರಾವ್ ಮುಖ್ಯಮಂತ್ರಿಯಾದ ನಂತರ ಜಾಗತಿಕವಾಗಿ ಪ್ರಸಿದ್ಧವಾಗಿವೆ ಎಂದು ಅವರು ಹೇಳಿದರು.