ಕರ್ನಾಟಕ

karnataka

ಕೋವಿಡ್​ ಪ್ರಕರಣಗಳು ಏರಿಕೆ: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಆರೋಗ್ಯ ಕಾರ್ಯದರ್ಶಿ

By

Published : Mar 16, 2023, 7:37 PM IST

Updated : Mar 16, 2023, 8:15 PM IST

ದೇಶಾದ್ಯಂತ ಕೋವಿಡ್​-19 ಅಬ್ಬರ ಜೋರು- ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳ ಸಂಖ್ಯೆ ಏರಿಕೆ - ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್.

Covid 19
ಕೋವಿಡ್​ 19

ನವದೆಹಲಿ:ದೇಶಾದ್ಯಂತ ಕೋವಿಡ್​-19 ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಕೋವಿಡ್​ ಪ್ರಕರಣಗಳ ಸಂಖ್ಯೆ ಏರುಗತಿ ಕಂಡುಬರುತ್ತದೆ. ಗುರುವಾರ, ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್​ ಕೇಸ್​ಗಳ ಅಂಕಿಅಂಶಗಳ ಮಾಹಿತಿಯನ್ನು ಪ್ರಕಟಿಸಿದೆ. ನಾಲ್ಕು ತಿಂಗಳ ಅಂತರದ ನಂತರ ಅಂದ್ರೆ, ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ಕೋವಿಡ್​-19 ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,623ಕ್ಕೆ ಏರಿಕೆಯಾಗಿದೆ.

ನಾಲ್ವರು ವಿದೇಶಿ ಪ್ರವಾಸಿಗರಿಗೆ ಕೋವಿಡ್​ ಪಾಸಿಟಿವ್:ಆಸ್ಟ್ರೇಲಿಯನ್ನರು ಸವಾಯಿ ಮಾಧೋಪುರದ ಹೋಟೆಲ್‌ನಲ್ಲಿ ತಂಗಿದ್ದರು. ಅವರು ಜೈಪುರಕ್ಕೆ ಕರೆತರಲಾಯಿತು. ಪರೀಕ್ಷೆಯ ನಂತರ ಅವರಿಗೆ ಕೋವಿಡ್​-19 ಸೋಂಕಿಗೆ ಪಾಸಿಟಿವ್​ ಇರುವುದು ಕಂಡುಬಂದಿದೆ. ಅವರನ್ನು ಆರ್​ಯುಎಚ್​ಎಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಕ್ಷಣವೇ ಪರಿಹರಿಸಬೇಕಾದ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದಾರೆ. ವಿವಿಧ ರಾಜ್ಯಗಳಲ್ಲಿ ಕೋವಿಡ್​-19 ಪರೀಕ್ಷೆ ಪಾಸಿಟಿವ್​ ದರಗಳಲ್ಲಿ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳು 0.01 ಪ್ರತಿಶತವನ್ನು ಒಳಗೊಂಡಿವೆ. ಆದರೆ, ಕೋವಿಡ್​-19 ಚೇತರಿಕೆ ದರವು 98.80 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯದ ವೆಬ್‌ಸೈಟ್​ನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ರಾಜಸ್ಥಾನಕ್ಕೆ ಪ್ರಯಾಣಿಸಿದ ಆಸ್ಟ್ರೇಲಿಯಾದ ಮಹಿಳೆ ಸೇರಿದಂತೆ ನಾಲ್ಕು ವಿದೇಶಿ ಪ್ರವಾಸಿಗರಿಗೆ ಬುಧವಾರ (ಮಾರ್ಚ್ 15) ಕೋವಿಡ್​ -19 ಪಾಸಿಟಿವ್​ ದೃಢಪಟ್ಟಿದೆ.

ರಾಜಸ್ಥಾನದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ:ರಾಜಸ್ಥಾನದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್​ಯುಎಚ್​​ಎಸ್) ಉಪಕುಲಪತಿ ಡಾ. ಸುಧೀರ್ ಭಂಡಾರಿ ಅವರು ಮಾತನಾಡಿ, ಆಸ್ಟ್ರೇಲಿಯನ್ನರು ಸವಾಯಿ ಮಾಧೋಪುರದ ಹೋಟೆಲ್‌ನಲ್ಲಿ ತಂಗಿದ್ದರು. ಅವರನ್ನು ಜೈಪುರಕ್ಕೆ ಕರೆತರಲಾಯಿತು. ಅವರಿಗೆ ಕೋವಿಡ್​-19 ಸೋಂಕು ಪಾಸಿಟಿವ್​ ಇರುವುದು ಪತ್ತೆಯಾಗಿದೆ. ಅವರನ್ನು ಬುಧವಾರ ರಾತ್ರಿ ಆರ್​ಯುಎಚ್​​ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪ್ರವಾಸಿಗರ ಸ್ಥಿತಿ ಸಾಮಾನ್ಯವಾಗಿದೆ. ನಾಲ್ಕನೆಯವರಲ್ಲಿ ಶೀತ ಹೆಚ್ಚಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಪತ್ರದಲ್ಲೇನಿದೆ:ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ''ಕಡಿಮೆ ಸಂಖ್ಯೆಯ ಹೊಸ ಪ್ರಕರಣಗಳು, ಅಷ್ಟೇ ಕಡಿಮೆ ಸಂಖ್ಯೆಯ ಆಸ್ಪತ್ರೆಗೆ ದಾಖಲಾಗಿರುವ ಮತ್ತು ಕೋವಿಡ್​-19 ಲಸಿಕೆ ವ್ಯಾಪ್ತಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿಗಳ ಹೊರತಾಗಿಯೂ, ಜಾಗರೂಕರಾಗಿರಲು ಮತ್ತು ಐದು ಪಟ್ಟು ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸುವ ಅವಶ್ಯಕತೆಯಿದೆ. ಟೆಸ್ಟ್- ಟ್ರ್ಯಾಕ್- ಟ್ರೀಟ್- ವ್ಯಾಕ್ಸಿನೇಷನ್ ಮತ್ತು ಕೋವಿಡ್​ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್​-19 ಚೇತರಿಕೆ ದರ ಶೇ.98.80: ಗುರುವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ನಾಲ್ಕು ತಿಂಗಳ ಅಂತರದ ಬಳಿಕ, ಒಂದೇ ದಿನದಲ್ಲಿ 700ಕ್ಕೂ ಹೆಚ್ಚು ಕೋವಿಡ್​-19 ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು ಸಕ್ರಿಯ ಪ್ರಕರಣಗಳು ಸಂಖ್ಯೆ 4,623ಕ್ಕೆ ಹೆಚ್ಚಳವಾಗಿವೆ. ಕಳೆದ ವರ್ಷ ನವೆಂಬರ್ 12 ರಂದು ದೇಶದಲ್ಲಿ 734 ಪ್ರಕರಣಗಳು ದಾಖಲಾಗಿದ್ದವು. ಆದರೆ, ಇತ್ತೀಚಿನ ಏರಿಕೆಯ ಪ್ರವೃತ್ತಿ ಮುಂದುವರೆಯುತ್ತ ಸಾಗಿದೆ. 24 ಗಂಟೆಗಳ ಅವಧಿಯಲ್ಲಿ ಒಟ್ಟು 754 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಕೋವಿಡ್​ ಸಕ್ರಿಯ ಪ್ರಕರಣಗಳು 0.01 ಪ್ರತಿಶತವನ್ನು ಒಳಗೊಂಡಿವೆ. ಆದರೆ, ದೇಶದ ಕೋವಿಡ್​-19 ಚೇತರಿಕೆ ದರವು 98.80 ಪ್ರತಿಶತದಷ್ಟು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:RT-qPCR ಕಿಟ್​ಗೆ ICMR ಅನುಮೋದನೆ: ಇನ್​ಫ್ಲುಯೆಂಜಾ, SARS-CoV-2, RSV ಪತ್ತೆಗೆ ಅನುಕೂಲ

Last Updated : Mar 16, 2023, 8:15 PM IST

ABOUT THE AUTHOR

...view details