ಕರ್ನಾಟಕ

karnataka

ETV Bharat / bharat

ಟೈರ್ ಪಂಕ್ಚರ್​ ಆಗಿ ಬಸ್​ ಮತ್ತೊಂದು ಬಸ್​ಗೆ ಡಿಕ್ಕಿ: ಏಳು ಮಂದಿ ದುರ್ಮರಣ - accidents in Sambhal

ಬಸ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಏಳು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಸಂಭಾಲ್​ ಜಿಲ್ಲೆಯಲ್ಲಿ ನಡೆದಿದೆ.

ಏಳು ಮಂದಿ ದುರ್ಮರಣ
ಏಳು ಮಂದಿ ದುರ್ಮರಣ

By

Published : Jul 19, 2021, 9:57 AM IST

ಸಂಭಾಲ್ (ಉತ್ತರಪ್ರದೇಶ):ಎರಡು ಬಸ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮದುವೆ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಲಹರಾವನ್ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.

ಮೃತರನ್ನು ವಿರ್ಪಾಲ್ (60), ಹ್ಯಾಪಿ (35), ಛೋಟೆ (40), ರಾಕೇಶ್ (30), ಅಭಯ್ (18), ವಿನೀತ್ (30) ಮತ್ತು ಭುರೆ (25) ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ, ಬಸ್​ ಪಂಕ್ಚರ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ, ಮತ್ತೊಂದು ಬಸ್​ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದರು.

ಇದನ್ನೂ ಓದಿ:ಅತ್ತೆಯ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ವಿಚ್ಛೇದಿತ ಸೊಸೆ

ABOUT THE AUTHOR

...view details