ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ಮಳೆಯಾರ್ಭಟ: 6 ಬಲಿ, ಇಬ್ಬರು ನಾಪತ್ತೆ, ಸಂಕಷ್ಟದಲ್ಲಿ 23,82,795 ಮಂದಿ! - ಮಳೆಯಾರ್ಭಟ

ಧಾರಾಕಾರ ಮಳೆಗೆ ಈವರೆಗೆ 6 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ. 23,82,795 ಜನರು ತೊಂದರೆಗೊಳಗಾಗಿದ್ದಾರೆ

Heavy Rainfall In Odisha
ಒಡಿಶಾದಲ್ಲಿ ಮಳೆಯಾರ್ಭಟ

By

Published : Sep 16, 2021, 9:58 AM IST

ಭುವನೇಶ್ವರ (ಒಡಿಶಾ): ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ ಕಚೇರಿಗೆ ಮಾಹಿತಿ ನೀಡಿದೆ.

ವರದಿಗಳ ಪ್ರಕಾರ, ಕೇಂದ್ರಪಾರ ಜಿಲ್ಲೆಯಲ್ಲಿ ಗೋಡೆ ಕುಸಿತದಿಂದ ಮೂವರು ಸಾವನ್ನಪ್ಪಿದ್ದಾರೆ. ಖೋರ್ಧಾ ಜಿಲ್ಲೆಯಲ್ಲಿ ಓರ್ವರು ಮುಳುಗಿದ್ದಾರೆ. ಇನ್ನಿಬ್ಬರು ಗಂಜಾಂ ಮತ್ತು ಸಬರ್ನ್​​​​ಪುರದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ:ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸ್ಥಗಿತ: ಭಕ್ತರ ಆಕ್ರೋಶ

ಐದು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ (ODRAF) ಮತ್ತು ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (NDRF) ತಂಡಗಳನ್ನು ಬಲಸೋರ್, ಭದ್ರಕ್ ಮತ್ತು ಕೇಂದ್ರಪಾರಾ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. 24 ಜಿಲ್ಲೆಗಳಾದ್ಯಂತ ಒಟ್ಟು 23,82,795 ಜನರು ತೊಂದರೆಗೊಳಗಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details