ಕರ್ನಾಟಕ

karnataka

By

Published : May 22, 2022, 5:46 PM IST

ETV Bharat / bharat

ಚಾರ್​ಧಾಮ್​ ಯಾತ್ರೆ.. 20 ದಿನದಲ್ಲಿ 57 ಜನ ಯಾತ್ರಿಕರ ಸಾವು

Chardham yatra.. 57 ಜನ ಯಾತ್ರಿಕರಲ್ಲಿ ಬಹುತೇಕರು ಹೃದಯಾಘಾತ ಮತ್ತು ಮೌಂಟೇನ್ ಸಿಕ್‌ನೆಸ್​ನಿಂದ ಮೃತಪಟ್ಟಿದ್ದಾರೆ ಎಂದು ಉತ್ತರಾಖಂಡದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

57 Chardham pilgrims dead
ಚಾರ್​ಧಾಮ್ ಯಾತ್ರಿಕರ ಸಾವು

ಡೆಹ್ರಾಡೂನ್ (ಉತ್ತರಾಖಂಡ): ಮೇ 3ರಿಂದ ಆರಂಭವಾಗಿರುವ ಪ್ರಸಿದ್ಧ ಚಾರ್​ಧಾಮ್​ ಯಾತ್ರೆಯಲ್ಲಿ ಇದುವರೆಗೆ 57 ಜನ ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಬಹುತೇಕ ಜನರು ಹೃದಯಾಘಾತ ಮತ್ತು ಯಾತ್ರಾ ಮಾರ್ಗಗಳಲ್ಲಿ ಮೌಂಟೇನ್ ಸಿಕ್‌ನೆಸ್​ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಉತ್ತರಾಖಂಡದ ಆರೋಗ್ಯ ಇಲಾಖೆಯ ಮಹಾ ನಿರ್ದೇಶಕಿ ಶೈಲಜಾ ಭಟ್, ಪ್ರಸ್ತುತ ಪ್ರಯಾಣದ ಮಾರ್ಗಗಳಲ್ಲಿ ಯಾತ್ರಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ತಪಾಸಣೆ ವೇಳೆ ತೊಂದರೆ ಕಂಡು ಬರುವವರಿಗೆ ಮುಂದೆ ತೆರಳದಂತೆ ಸಲಹೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಮ್ಮುಖದಲ್ಲಿ ಅಕ್ಷಯ ತೃತೀಯದಂದು ಗಂಗೋತ್ರಿ ಮತ್ತು ಯಮುನೋತ್ರಿ ಪೋರ್ಟಲ್​​ಗಳನ್ನು ತೆರೆಯುವುದರೊಂದಿಗೆ ಚಾರ್​ಧಾಮ್ ಯಾತ್ರೆ ಆರಂಭವಾಗಿತ್ತು. ಮೇ 6ರಂದು ಕೇದಾರನಾಥ ಮತ್ತು ಮೇ 8ರಂದು ಬದ್ರಿನಾಥ ಬಾಗಿಲು ತೆರೆಯಲಾಗಿತ್ತು.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ ಜಾರಿ, ಔರಂಗಾಬಾದ್ ನಗರದ ಹೆಸರು ಬದಲಿಸಲು ರಾಜ್​ ಠಾಕ್ರೆ ಆಗ್ರಹ

ABOUT THE AUTHOR

...view details