ಕರ್ನಾಟಕ

karnataka

ETV Bharat / bharat

ರೈತನ ಹೆಸರಲ್ಲಿ ನಕಲಿ ಸ್ಟೀಲ್​ ಕಂಪನಿ.. ₹5.58 ಕೋಟಿ ಜಿಎಸ್​ಟಿ ವಂಚಿಸಿದ ವ್ಯಕ್ತಿ ವಿರುದ್ಧ FIR - ಜಾರ್ಖಂಡ್​​ನಲ್ಲಿ ಜಿಎಸ್​ಟಿ ವಂಚನೆ ಪ್ರಕರಣ

ಜಿಎಸ್​ಟಿ ಇಲಾಖೆಯು ಈ ಕಂಪನಿಯ ಮಾಲೀಕರಿಗೆ ನೋಟಿಸ್ ಕಳುಹಿಸಿದೆ. ಸಂತ್ರಸ್ತೆಯ ಪ್ರಕಾರ, ಅವರು ಸಹಕಾರಿ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ತಮ್ಮ ಸೋದರಳಿಯ ಬೈಲಾ ಮುರ್ಮು ಅವರಿಗೆ 2018ರಲ್ಲಿ ನೀಡಿದ್ದರು..

creating fake company in the name of farmer
ಜಾರ್ಖಂಡ್​

By

Published : Dec 4, 2020, 1:35 PM IST

ಘಾಟ್​ಶಿಲಾ/ಜೆಮ್​ಶೆಡ್​ಪುರ :ಘಾಟ್​ಶಿಲಾ ಉಪವಿಭಾಗದ ಮುಸಾಬನಿ ಬ್ಲಾಕ್‌ನಲ್ಲಿ ಜಿಎಸ್‌ಟಿ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಮುಸಾಬಾನಿಯ ರೈಪಹಾರಿ ಗ್ರಾಮದ ನಿವಾಸಿ ಲಾಡುಮ್ ಮುರ್ಮು (48)ಗೆ ಬಾಕಿ ಇರುವ 3.5 ಕೋಟಿ ರೂ. ಜಿಎಸ್​​ಟಿ ಪಾವತಿಸುವಂತೆ ನೋಟಿಸ್​ ಕಳಿಸಲಾಗಿತ್ತು. ಅವಧಿ ಮುಗಿದ್ರೂ ಲಾಡೋಮ್ ಜಿಎಸ್​​ಟಿ ಹಣ ಕಟ್ಟಿಲ್ಲ. ಈ ಹಿನ್ನೆಲೆ ಆತನನ್ನು ಬಂಧಿಸಲಾಗಿದೆ.

ಬೇರೊಬ್ಬರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಅನ್ನು ದುರುಪಯೋಗಪಡಿಸಿಕೊಂಡು ಮೆಸ್ಸರ್ ಎಸ್‌ ಎಸ್ ಸ್ಟೀಲ್ ಹೆಸರಿನಲ್ಲಿ ನಕಲಿ ಕಂಪನಿಯೊಂದನ್ನು ಆರಂಭಿಸಿದ್ದಾನೆ. ಆದರೆ, ಇದನ್ನು ಪರಿಶೀಲಿಸದೇ ಜಿಎಸ್‌ಟಿ ಸಂಖ್ಯೆಯನ್ನು ಕಂಪನಿಗೆ ನೀಡಿದ್ದಾರೆ. ಇದೀಗ ಜಿಎಸ್‌ಟಿ ಅಧಿಕಾರಿಗಳಿಗೆ ಕೋಟ್ಯಂತರ ರೂ. ತೆರಿಗೆ ವಂಚಿಸಿದ್ದಾನೆ.

ಈ ಕಂಪನಿಯು 2018-19ರ ನವೆಂಬರ್-ಡಿಸೆಂಬರ್‌ನಲ್ಲಿ 5,58,05,408 ರೂ.ಗಳ ಮೌಲ್ಯದ ಉಕ್ಕನ್ನು ಟ್ರಿನೆಟ್ರಾ ಟ್ರೇಡರ್ಸ್, ಓಂಕಾರ್ ಟ್ರೇಡರ್ಸ್, ತ್ರಿನಾಥ್ ಎಂಟರ್‌ಪ್ರೈಸಸ್, ಆಲಂ ಮೆಟಲ್ ಸ್ಟೋರ್, ಸಿಂಧುಜಾ ಸ್ಟೀಲ್ ಮತ್ತು ಸುಭದ್ರಾ ಟ್ರೇಡರ್ಸ್​​ ಅವರಿಗೆ ಒಟ್ಟು 87ಇ-ವೇ ಬಿಲ್‌ಗಳ ಮೂಲಕ ವಸ್ತುಗಳನ್ನ ಮಾರಾಟ ಮಾಡಿದೆ. ಆದರೆ, ಇಷ್ಟು ದೊಡ್ಡ ಮೊತ್ತದ ವಹಿವಾಟಿಗೆ ಜಿಎಸ್‌ಟಿ ಪಾವತಿಸಿಲ್ಲ.

ಜಿಎಸ್​ಟಿ ಇಲಾಖೆಯು ಈ ಕಂಪನಿಯ ಮಾಲೀಕರಿಗೆ ನೋಟಿಸ್ ಕಳುಹಿಸಿದೆ. ಸಂತ್ರಸ್ತೆಯ ಪ್ರಕಾರ, ಅವರು ಸಹಕಾರಿ ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮತ್ತು ಇತರ ದಾಖಲೆಗಳನ್ನು ತಮ್ಮ ಸೋದರಳಿಯ ಬೈಲಾ ಮುರ್ಮು ಅವರಿಗೆ 2018ರಲ್ಲಿ ನೀಡಿದ್ದರು.

ಸರ್ಕಾರ ತನ್ನ ಖಾತೆಯಲ್ಲಿ ಪ್ರತಿ ತಿಂಗಳು 2000 ರೂಪಾಯಿಗಳನ್ನು ಪಾವತಿಸುತ್ತದೆ ಎಂದು ಹೇಳಿ ಬೈಲಾ ಮುರ್ಮು ಪಾಸ್‌ಬುಕ್, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪಡೆದನು ಎಂದು ಆಕೆ ತಿಳಿಸಿದ್ದಾರೆ.

ಜಿಎಸ್‌ಟಿ ಕಾಯ್ದೆ ಮತ್ತು ಐಪಿಸಿಯ ಸೆಕ್ಷನ್ 70ರ ಅಡಿ ಆರೋಪಿ ಬೈಲಾ ಮುರ್ಮು ಮೇಲೆ ಕೇಸ್​ ದಾಖಲಿಸಲಾಗಿದೆ. ಆದರೆ, ಮುರ್ಮು, ನಾನು ಅಷ್ಟೊಂದು ಹಣ ಎಲ್ಲಿಂದ ತರಲಿ ನಾನು ಯಾವುದೇ ತಪ್ಪು ಮಾಡಿಲ್ಲ, ದಯವಿಟ್ಟು ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

ABOUT THE AUTHOR

...view details