ನಯಾಗಢ: ಜಿಲ್ಲೆಯಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ತೈಲ ಟ್ಯಾಂಕರ್ವೊಂದು ಸೇತುವೆ ಮೇಲೆ ನದಿಗೆ ಬಿದ್ದು, ಸ್ಫೋಟಗೊಂಡ ಹಿನ್ನೆಲೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಶುಕ್ರವಾರ ಬಡ ಪಾಂಡುಸಾರ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ನಯಾಗಢದ ಸನಪಾಂಡುಸರ ಗ್ರಾಮದ ಬ್ಯಾರಿ, ಸಮೀರ್, ರಘು ಮತ್ತು ದೀಪಕ್ ಎಂದು ಗುರುತಿಸಲಾಗಿದೆ.
ಬೆಳಗಿನ ಜಾವ 2 ಗಂಟೆ ಸುಮಾರಿಗೆ ತೈಲ ಟ್ಯಾಂಕರ್ವೊಂದು ಪಾರಾದೀಪ್ನಿಂದ ನಯಾಗಢಕ್ಕೆ ತೆರಳುತ್ತಿದ್ದಾಗ ಬಡಪಾಂಡುಸಾರ ಸೇತುವೆ ಮೇಲಿಂದ ಕೆಳಗೆ ಬಿದ್ದಿದ್ದು, ಟ್ಯಾಂಕರ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಟ್ಯಾಂಕರ್ ಸ್ಫೋಟಗೊಂಡಿದೆ.