ಕರ್ನಾಟಕ

karnataka

ETV Bharat / bharat

Viral Video: ಚಿಂಕಾರ ಬೇಟೆ ತಡೆದ ಬಾಲಕ; ರಾಜಸ್ತಾನ ಅರಣ್ಯ ಮಂತ್ರಿಯಿಂದ ಶ್ಲಾಘನೆ - ವೈರಲ್ ವಿಡಿಯೋ

ಹುಡುಗನೋರ್ವ ಚಿಂಕಾರಾ ಪ್ರಾಣಿಗಳ ಬೇಟೆಗೆ ಬಂದಿದ್ದ ಬೇಟೆಗಾರರನ್ನು ತಡೆದಿದ್ದು ಮೆಚ್ಚುಗೆ ಗಳಿಸಿದ್ದಾನೆ.

17-yr-old stops armed poachers from hunting Chinkara, video goes viral
ಚಿಂಕಾರ ಬೇಟೆ ತಡೆದ ಬಾಲಕ, ರಾಜಸ್ತಾನ ಅರಣ್ಯ ಮಂತ್ರಿ ಶ್ಲಾಘನೆ

By

Published : Jun 15, 2021, 10:52 AM IST

ಬಾರ್ಮೆರ್​(ರಾಜಸ್ಥಾನ):ಬಂದೂಕು ಹಿಡಿದ ಬೇಟೆಗಾರರು ಕಾಡು ಪ್ರಾಣಿಯೊಂದನ್ನು ಬೇಟೆಯಾಡಲು ಯತ್ನಿಸುತ್ತಿದ್ದಾಗ, 17 ವರ್ಷದ ಬಾಲಕನೋರ್ವ ಅದನ್ನು ತಪ್ಪಿಸಿದ ಘಟನೆ ರಾಜಸ್ತಾನದ ಬಾರ್ಮೆರ್ ಜಿಲ್ಲೆಯ ಖರದಾ ಭರತ್ಸಿಂಗ್ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಬ್ಬರು ಬೇಟೆಗಾರರು ಚಿಂಕರಾ (ಜಿಂಕೆ ರೀತಿಯ ಪ್ರಾಣಿ) ಅನ್ನು ಬೇಟೆಯಾಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದಾಗ ಅಲ್ಲಿಗೆ ತೆರಳಿದ ಬಾಲಕ ಜುಜ್ಹಾರ್ ಸಿಂಗ್​​, ಅವರ ಬಳಿ ಬಂದೂಕು ಇರುವುದನ್ನೂ ಪರಿಗಣಿಸದೇ ವಿಡಿಯೋ ಚಿತ್ರೀಕರಣ ಮಾಡಲು ಮುಂದಾದ್ದಾನೆ. ಇದೇ ವೇಳೆ ಕಾಡು ಪ್ರಾಣಿಯನ್ನು ಬೇಟೆಯಾಡದಂತೆ ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ಅಪಾಯವನ್ನರಿತ ಬೇಟೆಗಾರರು ಪದೇ ಪದೇ ಕ್ಷಮೆಯಾಚನೆ ಮಾಡಿದ್ದು, ನಂತರ ಸ್ಥಳದಿಂದ ಪರಾರಿಯಾದರು.

ವೈರಲ್ ವಿಡಿಯೋ

ಜೂನ್ 10 ರಂದು ಈ ಘಟನೆ ನಡೆದಿರಬಹುದು ಎಂದು ಅಂದಾಜು ಮಾಡಲಾಗಿದೆ. ವನ್ಯಪ್ರೇಮಿಗಳು ಬಾರ್ಮೆರ್​ ಅರಣ್ಯ ಇಲಾಖೆಗೆ ಈ ವಿಡಿಯೋ ತಲುಪಿಸಿದ್ದು, ಬೇಟೆಗಾರರನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಜಾಗತಿಕ ಭದ್ರತೆಗೆ ಚೀನಾ ಸವಾಲು: ನ್ಯಾಟೋ ಘೋಷಣೆ

ಇದಾದ ನಂತರ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿರುವುದು ಮಾತ್ರವಲ್ಲದೇ, ಬೇಟೆಗಾರರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಬೇಟೆಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆಯಲ್ಲಿ ಪ್ರಾಣಿಯೊಂದರ ರಕ್ತದ ಕಲೆಗಳು ಪತ್ತೆಯಾಗಿದ್ದು, ಅವುಗಳನ್ನು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ವಿಚಾರ ತಿಳಿದ ಬಿಷ್ಣೋಯ್​ ಸಮಾಜದ ಮುಖಂಡ ಕುಲದೀಪ್ ಬಿಷ್ಣೋಯ್ ಬಾಲಕನಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅಷ್ಟೇ ಅಲ್ಲದೇ ರಾಜಸ್ಥಾನ ಅರಣ್ಯ ಸಚಿವ ಸುಖ್ರಾಮ್​ ಬಿಷ್ಣೋಯ್ ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details