ಕರ್ನಾಟಕ

karnataka

ಧಾರ್ಮಿಕ ಶಾಲೆಯಲ್ಲಿ 17 ವರ್ಷದ ಬಾಲಕಿ ಶವವಾಗಿ ಪತ್ತೆ

By

Published : May 14, 2023, 10:49 PM IST

ಕೇರಳದ ತಿರುವನಂತಪುರಂನ ಧಾರ್ಮಿಕ ಶಾಲೆಯಲ್ಲಿ 17 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಧಾರ್ಮಿಕ ಶಾಲೆಯಲ್ಲಿ 17 ವರ್ಷದ ಬಾಲಕಿ ಶವವಾಗಿ ಪತ್ತೆ
ಧಾರ್ಮಿಕ ಶಾಲೆಯಲ್ಲಿ 17 ವರ್ಷದ ಬಾಲಕಿ ಶವವಾಗಿ ಪತ್ತೆ

ತಿರುವನಂತಪುರಂ(ಕೇರಳ) :ಇಲ್ಲಿನಬಲರಾಮಪುರಂನ ಧಾರ್ಮಿಕ ಶಾಲೆಯಲ್ಲಿ ಮೇ 13 ರಂದು 17 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಬೀಮಾಪಲ್ಲಿ ಮೂಲದ ಬಾಲಕಿ ಎಂದು ಮೃತಳು. ಬಲರಾಮಪುರಂನ ಅಲ್ ಅಮಾನ್ ಧಾರ್ಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಧಾರ್ಮಿಕ ಶಾಲೆಯ ಅಡುಗೆ ಕೋಣೆಯ ಪಕ್ಕದ ಕೋಣೆಯಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.

ಶನಿವಾರ ಮಧ್ಯಾಹ್ನ ಬಾಲಕಿಯು ತನ್ನ ತಾಯಿಗೆ ಕರೆ ಮಾಡಿ ಸಂಸ್ಥೆಗೆ ಬರುವಂತೆ ಹೇಳಿದ್ದಾಳೆ. ನಂತರ ಸಂಸ್ಥೆಯ ಅಧಿಕಾರಿಗಳು ಬಾಲಕಿ ಶವವಾಗಿ ಪತ್ತೆಯಾಗಿರುವುದನ್ನು ಆಕೆಯ ತಾಯಿಗೆ ತಿಳಿಸಿದ್ದಾರೆ. ಸಾವು ನಿಗೂಢವಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಲರಾಮಪುರಂ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಬಾಲಕಿಯು ಧಾರ್ಮಿಕ ಶಾಲೆಯಲ್ಲಿ ವಾಸವಾಗಿದ್ದುಕೊಂಡು ಓದುತ್ತಿದ್ದಾಳೆ. ಅವಳು ಸಾಮಾನ್ಯವಾಗಿ ಶುಕ್ರವಾರದಂದು ಮನೆಗೆ ಕರೆ ಮಾಡುತ್ತಾಳೆ. ಆದರೆ ಕಳೆದ ಶುಕ್ರವಾರ ಫೋನ್ ಮಾಡದ ಹಿನ್ನೆಲೆಯಲ್ಲಿ ಆಕೆಯ ತಾಯಿ ಸಂಸ್ಥೆಗೆ ಕರೆ ಮಾಡಿದ್ದಾರೆ. ಆಗ ತನ್ನ ತಾಯಿಯನ್ನು ಸಂಸ್ಥೆಗೆ ಬರುವಂತೆ ಹೇಳಿದ್ದಾಳೆ. ನಂತರ ಅವರು ಬಂದಾಗ ಮಗಳು ಶವವಾಗಿ ಪತ್ತೆಯಾಗಿದ್ದಳು. ಉಸ್ತಾದ್ ಮತ್ತು ಸಂಸ್ಥೆಯ ಶಿಕ್ಷಕರು ತನ್ನ ಮೇಲೆ ಟೀಕೆ ಮಾಡಿದ್ದಾರೆ ಎಂದು ಬಾಲಕಿ ಹೇಳಿದ್ದಳು ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ.

ಕೇರಳದ ಸೆಕ್ರೆಟರಿಯೇಟ್‌ನಲ್ಲಿ ಅಗ್ನಿ ಅವಘಡ : ತಿರುವನಂತಪುರಂನಲ್ಲಿರುವ ಕೇರಳದ ಆಡಳಿತ ಕೇಂದ್ರವಾದ ಸೆಕ್ರೆಟರಿಯೇಟ್‌ನಲ್ಲಿ (ಮೇ 9-2023) ರಂದು ಅಗ್ನಿ ಅವಘಡ ಸಂಭವಿಸಿತ್ತು. ಅಂದು ಬೆಳಗ್ಗೆ 7:55ರ ಸುಮಾರಿಗೆ ನಾರ್ತ್ ಸ್ಯಾಂಡ್‌ವಿಚ್ ಬ್ಲಾಕ್‌ನ 3ನೇ ಮಹಡಿಯಲ್ಲಿರುವ ಕೈಗಾರಿಕಾ ಸಚಿವ ಪಿ ರಾಜೀವ್ ಅವರ ಕಚೇರಿಯ ಪಕ್ಕದಲ್ಲಿ ಅಗ್ನಿ ಅವಘಡ ದುರಂತ ಕಾಣಿಸಿಕೊಂಡಿತ್ತು.

ಬೆಳಗ್ಗೆ ಕಟ್ಟಡದಿಂದ ಹೊಗೆ ಏಳುತ್ತಿರುವುದನ್ನು ಕಂಡ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. 8.15ರ ಸುಮಾರಿಗೆ ಸಚಿವಾಲಯಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಎರಡು ಘಟಕಗಳು ಬೆಂಕಿಯನ್ನು ಹತೋಟಿಗೆ ತಂದಿದ್ದವು. ಅವಘಡದಲ್ಲಿ ಕಚೇರಿಯ ಮೇಲ್ಛಾವಣಿ ಮತ್ತು ಪರದೆ ಸುಟ್ಟು ಭಸ್ಮವಾಗಿತ್ತು. ಕಡತಗಳು ಸುಟ್ಟು ಹೋಗಿಲ್ಲ. ಆದರೆ ಬೆಂಕಿ ನಂದಿಸುವ ಯತ್ನದಲ್ಲಿ ಕಡತಗಳು ಒದ್ದೆಯಾಗಿವೆ ಎಂದು ವರದಿಯಾಗಿತ್ತು.

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ಮೂಲಗಳಿಂದ ಮಾಹಿತಿ ಬಂದಿತ್ತು. ನಾರ್ತ್ ಸ್ಯಾಂಡ್‌ವಿಚ್ ಬ್ಲಾಕ್‌ನಲ್ಲಿ ಪ್ರಸ್ತುತ ವಿದ್ಯುತ್ ಸ್ಥಗಿತಗೊಂಡಿತ್ತು. ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಜಿಲ್ಲಾಧಿಕಾರಿ ಜೆರೊಮಿಕ್ ಜಾರ್ಜ್ ಸ್ಥಳಕ್ಕೆ ಭೇಟಿ ನೀಡಿದ್ದರು. ಅಗ್ನಿ ಅವಘಡದ ಹಿನ್ನೆಲೆ ಸಚಿವಾಲಯಕ್ಕೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಎಲ್ಲಾ ಗೇಟ್‌ಗಳಲ್ಲಿ ಭದ್ರತಾ ಕಾರ್ಯಕ್ಕಾಗಿ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು.

ಇದನ್ನೂ ಓದಿ:ಕೇರಳದಲ್ಲಿ 12,000 ಕೋಟಿ ರೂ ಮೌಲ್ಯದ ಮಾದಕ ವಸ್ತು ಜಪ್ತಿ! ಪಾಕ್ ಪ್ರಜೆ ಎನ್‌ಸಿಬಿ ವಶಕ್ಕೆ

ABOUT THE AUTHOR

...view details