ಕರ್ನಾಟಕ

karnataka

By

Published : May 4, 2022, 4:21 PM IST

ETV Bharat / bharat

ಬಿಸಿಲಿನ ಹೊಡೆತಕ್ಕೆ 4 ವಾರದಲ್ಲಿ 17 ಜನರ ಸಾವು

ಬಿಸಿಲಿನ ಬೇಗೆ ನಡುವೆ ತೆಲಂಗಾಣದಾದ್ಯಂತ ಬುಧವಾರ ನಸುಕಿನಲ್ಲಿ ಧಾರಾಕಾರ ಮಳೆ ಸುರಿದಿದೆ. ರಾಜಧಾನಿ ಹೈದರಾಬಾದ್​ ಸೇರಿ ಕೆಲವೆಡೆ ಜನ ಜೀವನ ಅಸ್ತವ್ಯಸ್ತಗೊಂಡಿದೆ.

Sun Stroke in Telangana
ತೆಲಂಗಾಣದದ್ಯಾಂತ ಬಿಸಿಲ ಬೇಗೆ

ಹೈದರಾಬಾದ್​ (ತೆಲಂಗಾಣ): ಬಿಸಿಲಿನ ಹೊಡೆತಕ್ಕೆ ತೆಲಂಗಾಣ ಕಂಗಾಲಾಗಿದೆ. ಕಳೆದ ನಾಲ್ಕು ವಾರದಲ್ಲಿ ರಾಜ್ಯಾದ್ಯಂತ ಕೃಷಿ ಮತ್ತು ಕೂಲಿ ಕಾರ್ಮಿಕರು ಸೇರಿ 17 ಜನ ಸಾವನ್ನಪ್ಪಿದ್ದಾರೆ. ಇದರ ನಡುವೆ ಬುಧವಾರ ಬೆಳಗಿನ ಜಾವ ಭಾರಿ ಮಳೆಯಾಗಿದ್ದು, ಜನರಲ್ಲಿ ಕೊಂಚ ನೆಮ್ಮದಿ ಮೂಡಿಸಿದಂತೆ ಆಗಿದೆ.

ಬಿಸಿಲ ಝಳಕ್ಕೆ ಮಂಗಳವಾರ ಒಂದೇ ದಿನದಲ್ಲಿ ಬೇರೆ - ಬೇರೆ ಜಿಲ್ಲೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಬಿಸಿಲಿನ ಬೇಗೆ ತಾಳದೇ ಆಸ್ಪತ್ರೆಗಳಿಗೆ ಸೇರುವವರ ಸಂಖ್ಯೆಯೂ ಅಧಿಕವಾಗಿದೆ. ರಾಜ್ಯದ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ 5ರಿಂದ 10 ಮಂದಿ ರೋಗಿಗಳು ಬಿಸಿಲಿನಿಂದ ಬಳಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ಬಿಸಿ ವಾತಾವರಣಕ್ಕೆ ಜಾನುವಾರುಗಳು ಸಹ ತತ್ತರಿಸಿವೆ. ಕೋಳಿಗಳು, ಹಸುಗಳು ಮತ್ತು ಎಮ್ಮೆಗಳು ಕೂಡ ತಾಪಮಾನದಿಂದ ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಹೈನುಗಾರಿಕೆ ಉದ್ಯಮದ ಮೇಲೂ ಹೊಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ಹೈದರಾಬಾದ್​ನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳು ಜಲಾವೃತ, ಕೆಲವೆಡೆ ವಿದ್ಯುತ್ ಕಡಿತ, ಬೆಳೆಹಾನಿ

ABOUT THE AUTHOR

...view details