ಕರ್ನಾಟಕ

karnataka

By

Published : Nov 28, 2021, 9:29 AM IST

Updated : Nov 28, 2021, 11:30 AM IST

ETV Bharat / bharat

ಲಾರಿಗೆ ಗುದ್ದಿದ ಶವಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನ: ಪ.ಬಂಗಾಳದಲ್ಲಿ 18 ಮಂದಿ ದುರ್ಮರಣ

ಶವಸಂಸ್ಕಾರಕ್ಕೆಂದು ಮಹಿಳೆಯ ಶವ ಕೊಂಡೊಯ್ಯುತ್ತಿದ್ದ ವಾಹನ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, 18 ಮಂದಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಹಂಸಖಾಲಿಯಲ್ಲಿ ನಡೆದಿದೆ.

17 died in a road accident as vehicle carrying body for cremation in nadia
ಅಪಘಾತದಲ್ಲಿ 17 ಮಂದಿ ಸಾವು

ನಾಡಿಯಾ (ಪಶ್ಚಿಮ ಬಂಗಾಳ):ಶವಸಂಸ್ಕಾರಕ್ಕೆಂದು ತೆರಳುತ್ತಿದ್ದ ವಾಹನ ಹಾಗೂಕಲ್ಲು ತುಂಬಿದ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ, 5 ಮಂದಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಇಲ್ಲಿನ ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ವರದಿಯಾಗಿದೆ.


ನಾಡಿಯಾ ಜಿಲ್ಲೆಯ ಫುಲ್ಬರಿ ರಾಜ್ಯ ಹೆದ್ದಾರಿಯಲ್ಲಿ ಕಳೆದ ರಾತ್ರಿ 12 ಗಂಟೆಯ ಸುಮಾರಿಗೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರು, ಮಹಿಳೆಯ ಶವವನ್ನು ಅಂತ್ಯಸಂಸ್ಕಾರಕ್ಕೆಂದು ಮೆಟಾಡೋರ್​ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ದಟ್ಟವಾದ ಮಂಜು ಮತ್ತು ವಾಹನದ ಅತಿಯಾದ ವೇಗದಿಂದಾಗಿ ಶವ ಸಾಗಿಸುತ್ತಿದ್ದ ವಾಹನ ಕಲ್ಲು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹಂಸಖಾಲಿ ಪೊಲೀಸರು ಗಾಯಾಳುಗಳನ್ನು ಶಕ್ತಿನಗರ ಆಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಕರಣದ ಪೊಲೀಸ್‌ ತನಿಖೆ ನಡೆಯುತ್ತಿದೆ.

Last Updated : Nov 28, 2021, 11:30 AM IST

For All Latest Updates

ABOUT THE AUTHOR

...view details