ಕರ್ನಾಟಕ

karnataka

By

Published : Apr 29, 2021, 10:56 AM IST

ETV Bharat / bharat

ಚುನಾವಣಾ ಕರ್ತವ್ಯ ನಿರ್ವಹಿಸಿದ್ದ 11 ಶಿಕ್ಷಕರು ಕೋವಿಡ್​ಗೆ ಬಲಿ

ಗ್ರಾಮ ಪಂಚಾಯತ್​ ಚುನಾವಣಾ ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ ಶಿಕ್ಷಕರ ಪೈಕಿ ಬಹುತೇಕ ಮಂದಿ ಕೋವಿಡ್​ಗೆ ತುತ್ತಾಗಿದ್ದಾರೆ. ಈಗಾಗಲೇ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ವಿಚಾರ ಚುನಾವಣಾ ಕರ್ತವ್ಯ ನಿರ್ವಹಿಸಿದ ಇತರ ಶಿಕ್ಷಕರ ಆತಂಕಕ್ಕೆ ಕಾರಣವಾಗಿದೆ.

teachers died due to covid
ಶಿಕ್ಷಕರು ಕೋವಿಡ್​ಗೆ ಬಲಿ

ಸಹರಾನ್​ಪುರ ( ಉತ್ತರ ಪ್ರದೇಶ ): ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ ಇಬ್ಬರು ಶಿಕ್ಷಕಿಯರು ಸೇರಿದಂತೆ ಒಟ್ಟು 11 ಶಿಕ್ಷಕರು ಕೋವಿಡ್ ಸೋಂಕಿಗೆ ಬಲಿಯಾಗದ್ದಾರೆ. ಈ ವಿಚಾರ ಚುನಾವಣಾ ಕರ್ತವ್ಯ ನಿರ್ವಹಿಸಿದ ಇತರ ಶಿಕ್ಷಕರಲ್ಲಿ ಆತಂಕ ಸೃಷ್ಟಿಸಿದೆ.

ಕೋವಿಡ್ ಸೋಂಕಿನಿಂದ ಶಿಕ್ಷಕರು ಮೃತಪಟ್ಟ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಚುನಾವಣಾ ಕರ್ತವ್ಯ ನಿರ್ವಹಿಸಿದ ಇತರ ಹಲವು ಶಿಕ್ಷಕರು ಕಳೆದ 13 ದಿನಗಳಿಂದ ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಚುನಾವಣಾ ಕರ್ತವ್ಯದಿಂದ ಮರಳಿದ 4 ಶಿಕ್ಷಕರು ಮೃತಪಟ್ಟಿರುವುದನ್ನು ಚುನಾವಣಾ ಅಧಿಕಾರಿ ಬಿ.ಎಸ್.ರಮೇಂದ್ರ ಕುಮಾರ್ ಒಪ್ಪಿಕೊಂಡಿದ್ದು, ಕ್ಯಾಮರಾ ಮುಂದೆ ಹೇಳಲು ನಿರಾಕರಿಸಿದ್ದಾರೆ.

ಮನೋಜ್ ಕುಮಾರ್, ಮೃತ ಶಿಕ್ಷಕಿಯ ಪತಿ

ಚುನಾವಣಾ ಕರ್ತವ್ಯ ನಿರ್ವಹಿಸಿದವರಿಗೆ ಕೋವಿಡ್ ಪಾಸಿಟಿವ್:

ಸಹರಾನ್​​ಪುರ ಜಿಲ್ಲೆಯ ಗ್ರಾಮ ಪಂಚಾಯತ್​ಗಳಿಗೆ ನಡೆಯುತ್ತಿರುವ ಮೂರು ಹಂತಗಳ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 15ರಂದು ನಡೆಯಿತು. 884 ಗ್ರಾಮ ಪಂಚಾಯತ್​ಗಳ 1,236 ಮತಗಟ್ಟೆಗಳಿಗೆ 3,283 ಶಿಕ್ಷಕರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಈ ಶಿಕ್ಷಕರಿಗೆ ಏಪ್ರಿಲ್ 7ರಿಂದ ಚುನಾವಣಾ ಕರ್ತವ್ಯದ ತರಬೇತಿ ನೀಡಲಾಗಿತ್ತು. ಕೋವಿಡ್ ನಡುವೆಯೂ ಇವರೆಲ್ಲರೂ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಮನೆಗೆ ಮರಳಿದ ಬಳಿಕ ಬಹುತೇಕ ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿದೆ.

11 ಶಿಕ್ಷಕರು ಸಾವು:

ಪಂಚಾಯತ್ ಚುನಾವಣೆಯ ಕರ್ತವ್ಯದಲ್ಲಿದ್ದಾಗ ಕೋವಿಡ್​ ಸೋಂಕಿಗೆ ತುತ್ತಾದ ಇಬ್ಬರು ಶಿಕ್ಷಕಿಯರು ಸೇರಿದಂತೆ ಒಟ್ಟು 11 ಶಿಕ್ಷಕರು ಮೃತಪಟ್ಟಿದ್ದಾರೆ. ಈ ವಿಚಾರ ಸರ್ಕಾರಿ ಶಿಕ್ಷಕರಲ್ಲಿ ಆತಂಕ ಉಂಟುಮಾಡಿದೆ. ಮನೆಗೆ ಮರಳಿದ ಶಿಕ್ಷಕರು ಈಗ ತಮ್ಮ ಕುಟುಂಬ ಸದಸ್ಯರ ಬಗ್ಗೆ ಚಿಂತಿತರಾಗಿದ್ದಾರೆ. ಕೆಲವು ಶಿಕ್ಷಕರು ತಮ್ಮ ಮನೆಗಳಲ್ಲಿ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಶಿಕ್ಷಕರ ಸಾವನ್ನು ಅವರ ಕುಟುಂಬಸ್ಥರು ದೃಢಪಡಿಸಿದ್ದಾರೆ. ಕೆಲವು ಶಿಕ್ಷಕರಿಗೆ ಚುನಾವಣೆಗಿಂತ ಮೊದಲೇ ಆರೋಗ್ಯ ಹದೆಗೆಟ್ಟಿತ್ತು. ಆದರೂ, ಅವರಿಂದ ಕೆಲಸ ಮಾಡಿಲಾಗಿದೆ. ಕೋವಿಡ್ ಟೆಸ್ಟ್ ಕೂಡ ಮಾಡಿಸಿಲ್ಲ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

ABOUT THE AUTHOR

...view details