ಕರ್ನಾಟಕ

karnataka

ETV Bharat / bharat

ಯಾಸೀನ್​ ಮನೆ ಬಳಿ ದೇಶದ್ರೋಹದ ಘೋಷಣೆ, ಕಲ್ಲು ತೂರಾಟ.. 10 ಜನರ ಬಂಧನ

ದೇಶದ್ರೋಹದ ಘೋಷಣೆಗಳು ಮತ್ತು ಕಲ್ಲು ತೂರಾಟ ನಡೆಸಿದ್ದ ಹತ್ತು ಜನರ ಕಿಡಿಗೇಡಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ.

By

Published : May 26, 2022, 12:20 PM IST

ಶ್ರೀನಗರ ಪೊಲೀಸರಿಂದ ಹತ್ತು ಆರೋಪಿಗಳ ಬಂಧನ
10 accused arrested in Srinagar

ಶ್ರೀನಗರ (ಜಮ್ಮು-ಕಾಶ್ಮೀರ):ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸೀನ್​ ಮಲಿಕ್​ಗೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ದೇಶದ್ರೋಹದ ಘೋಷಣೆಗಳನ್ನು ಕೂಗಿದ್ದ ಹತ್ತು ಜನ ಆರೋಪಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಯಾಸೀನ್​ ಮನೆ ಬಳಿ ಕಲ್ಲು ತೂರಾಟ ಕೂಡ ನಡೆಸಿದ್ದರು ಎನ್ನಲಾಗ್ತಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸಿದ ಪ್ರಕರಣದಲ್ಲಿ ಯಾಸೀನ್​ ಮಲಿಕ್​ ದೋಷಿಯಾಗಿದ್ದು, ಬುಧವಾರ ಎನ್ಐ​ಎ ವಿಶೇಷ ಕೋರ್ಟ್​ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಶಿಕ್ಷೆ ಪ್ರಮಾಣ ಘೋಷಿಸುವ ಸಂದರ್ಭದಲ್ಲಿ ಆರೋಪಿಗಳು ಯಾಸೀನ್​ ಮನೆ ಮುಂದೆ ಜಮಾವಣೆಗೊಂಡು ದಾಂಧಲೆ ನಡೆಸಿದ್ದರು. ಪ್ರಸ್ತುತ ಎಲ್ಲ ಪ್ರದೇಶಗಳಲ್ಲಿ ಶಾಂತ ರೀತಿಯ ವಾತಾವರಣ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಉಗ್ರ ಯಾಸಿನ್ ಮಲಿಕ್​ಗೆ ಜೀವಾವಧಿ ಶಿಕ್ಷೆ, ₹10 ಲಕ್ಷ ದಂಡ: ದೆಹಲಿ ಎನ್​ಐಎ ಕೋರ್ಟ್​ನಿಂದ ಮಹತ್ವದ ತೀರ್ಪು

ABOUT THE AUTHOR

...view details